ಗೋಣಿಕೊಪ್ಪಲು, ಅ. 8: ಮಾಯಮುಡಿ ಕಾವೇರಿ ಅಸೋಸಿಯೆಷನ್ ವತಿಯಿಂದ ನಡೆದ ಕೈಲ್‍ಪೊಳ್ದ್ ಕ್ರೀಡಾಕೂಟದಲ್ಲಿ ಹಲವು ಕ್ರೀಡೆಗಳು ನಡೆದವು.

ಮಹಿಳೆಯರು ಹಾಗೂ ಪುರುಷರಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಕಲ್ಲಿನಿಂದ ತೆಂಗಿನ ಕಾಯಿ ಹೊಡೆಯುವ ಸ್ಪರ್ಧೆ ಹಾಗೂ ಭಾರದ ಗುಂಡು ಎಸೆತ ಸ್ಫರ್ಧೆಗಳು ನಡೆಯಿತು.

ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುದೀರ್ ಕ್ರೀಡಾಕೂಟ ಉದ್ಘಾಟಿಸಿದರು. ಕ್ರೀಡಾಕೂಟ ಕಾರ್ಯದರ್ಶಿಗಳಾದ ಪುಚ್ಚಿಮಾಡ ರಾಯ್, ಚೆಪ್ಪುಡೀರ ದರ್ಶನ್ ಬೆಳ್ಯಪ್ಪ ಕ್ರೀಡಾಕೂಟ ನಡೆಸಿಕೊಟ್ಟರು.

ಕಮಿಟಿ ನಿರ್ದೇಶಕರುಗಳಾದ ಬಲ್ಯಂಡ ಪ್ರತಾಪ್, ಮಾಚಿಮಡ ದೇವಾನಂದ್, ಆಪಟ್ಟೀರ ಬೋಪಣ್ಣ, ಕಾಳಪಂಡ ನರೇಂದ್ರ, ಎಸ್ ವಿ ಮಂಜುನಾಥ್ ಉಪಸ್ಥಿತರಿದ್ದರು. ಹಿರಿಯರುಗಳಾದ ಆಪಟ್ಟೀರ ಬಿ ಸುಬ್ಬಯ್ಯ, ಚೆಪ್ಪುಡೀರ ಸಿ ಚೆಂಗಪ್ಪ ಹಾಗೂ ಸಣ್ಣುವಂಡ ಕೆ ಪೊನ್ನಪ್ಪ ಬಹುಮಾನ ವಿತರಿಸಿದರು.