ಚೆಟ್ಟಳ್ಳಿ, ಅ. 8: ಕೇಂದ್ರ ಸರಕಾರ ಬಡವರಿಗೆ ಅಕ್ಕಿ, ಉಪ್ಪು, ಬೇಳೆಯನ್ನು ಕಡಿಮೆ ದರದಲ್ಲಿ ರಾಜ್ಯ ಸರಕಾರಕ್ಕೆ ನೀಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೂ. 2 ಕಡಿಮೆ ಮಾಡಿ ತಮ್ಮ ಫೋಟೋವನ್ನು ಹಾಕಿಸಿಕೊಂಡು ಕೇಂದ್ರದ ದುಡ್ಡಿನಲ್ಲಿ ಜಾತ್ರೆ ಮಾಡುತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.

ಹೊಗೆಯಲ್ಲಿ ಬೇಯುತಿದ್ದ 6 ಕೋಟಿ ತಾಯಂದಿರಿಗೆ ಕೇಂದ್ರದ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಿದೆ. ಸಾಮಾನ್ಯರಿಗೆಲ್ಲ ವೈದ್ಯಕೀಯ ಸಲಕರಣೆಗಳು ಕಡಿಮೆ ಬೆಲೆಯಲ್ಲಿ ದೊರಕುವಂತೆ ಮಾಡಿದೆ.

ಚೆಟ್ಟಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ, ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರಿಗೆ ಶಾಲು ಹೊದಿಸಿ ಹಣ್ಣು, ಹಂಪಲನ್ನು ನೀಡಿದರೆ, ತಾ. ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತ್ರಿಶೂಲವನ್ನು ನೀಡಿ ಗೌರವಿಸಿದರು.

ಕಾಂಗ್ರೆಸ್ ಸರಕಾರ ಶೂನ್ಯ ಸಾಧನೆ ಅವಧಿಯಲ್ಲಿ ಅಧಿಕಾರಿಗಳ ಸಹಿತ ಅನೇಕರ ಕೊಲೆಯಾಗಿದೆ. ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಯಾರಿಗೂ ಅನ್ಯಾಯ ಎಸಗಿಲ್ಲ. ಆದರೆ ಆಡಳಿತದಲ್ಲಿರುವ ಕಾಂಗ್ರೆಸ್‍ನ ಸಿದ್ದರಾಮಯ್ಯ ಹಿಂದೂಗಳು ಎನ್ನಲು ಭಯ ಆದರೆ ಅಲ್ಪಸಂಖ್ಯಾತರೆಂದು ಕೊಂಡು ಓಲೈಸುವ ಕೆಲಸ ಮಾಡುತಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಹಣವಿಲ್ಲ. ನರೆಂದ್ರ ಮೋದಿ ಅವರ ಮನ್ ಕೀ ಬಾತ್ ಅದೆಷ್ಟೋ ಜನರಿಗೆ ಪ್ರೇರಣೆಯಾಗಿದೆ. ಭಯೋತ್ಪಾದಕರ ನಿಯಂತ್ರಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಹಿಂದೂ ರಾಷ್ಟ್ರದಲ್ಲಿ 33 ಕೋಟಿ ದೇವರಿರುವ ಗೋವಿನ ಹತ್ಯೆಯಾಗುತ್ತಿರುವದು ವಿಷಾದನೀಯವೆಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.

ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸಿದ್ದರಾಮಯ್ಯವರ ಸರಕಾರ ನಿದ್ದೆ ಮಾಡುವದನ್ನು ಬಿಡುವದರ ಜೊತೆಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಕಾಂಗ್ರೆಸ್‍ನ ಹಿರಿಯ ನಾಯಕರುಗಳೇ ಕಾಂಗ್ರೆಸ್ ಪಕ್ಷವನ್ನು ದೂರುತ್ತಿದ್ದಾರೆ. ಬಿಜೆಪಿಯ ಗೆಲುವಿಗಾಗಿ ಮನೆ-ಮನೆ ಭೇಟಿ ಕಾರ್ಯಕ್ರಮವನ್ನು