ಮಡಿಕೇರಿ, ಅ. 10: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಪೇರೂರು ಗ್ರಾಮದ ಬೆಳ್ಳರಿ ಹೊಳೆಯಲ್ಲಿ ನಿನ್ನೆ ಅಪರಿಚಿತ ವ್ಯಕ್ತಿಯೋರ್ವನ ಶವವು ರುಂಡ ಬೇರ್ಪಟ್ಟು ಗೋಚರಿಸಿದ್ದು, ದುಷ್ಕರ್ಮಿಗಳು ಕೊಲೆಗೈದಿರುವ ಶಂಕೆ ವ್ಯಕ್ತಗೊಂಡಿದೆ.

ಅಂದಾಜು 40 ರಿಂದ 50 ವರ್ಷದೊಳಗಿನ ಈ ಅಪರಿಚಿತ ಬಿಳಿ ನೀಲಿ ಚೌಕಳಿ ಅಂಗಿ, ನೀಲಿ ಜೀನ್ಸ್, ಒಳಚೆಡ್ಡಿಯೊಂದಿಗೆ ಕಪ್ಪು ಪ್ಯಾಂಟ್ ಧರಿಸಿರುವದಾಗಿದ್ದು, ರುಂಡ ಬೇರ್ಪಟ್ಟ ಶವ ಕೊಳೆತ ಸ್ಥಿತಿಯಲ್ಲಿ ಗೋಚರಿಸಿದೆ.

ಬಲ್ಲಮಾವಟಿ ಗ್ರಾ.ಪಂ. ಸದಸ್ಯ ಚಂಗೆಟೀರ ಸೋಮಣ್ಣ ಎಂಬವರು ಪುಕಾರು ನೀಡಿದ ಮೇರೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಗೋಚರಿಸಿದೆ.

ಬಲ್ಲಮಾವಟಿ ಗ್ರಾ.ಪಂ. ಸದಸ್ಯ ಚಂಗೆಟೀರ ಸೋಮಣ್ಣ ಎಂಬವರು ಪುಕಾರು ನೀಡಿದ ಮೇರೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೊಳೆಯಲ್ಲಿ ಸಾವನ್ನಪ್ಪಿರುವದಾಗಿ ಅಥವಾ ಕೊಲೆಯಾಗಿರುವ ಬಗ್ಗೆ ಜನವಲಯದಲ್ಲಿ ಸಂಶಯ ವ್ಯಕ್ತಗೊಂಡಿದೆ.