ಮಡಿಕೇರಿ, ಅ. 11: ಕೊಡವ ಮಕ್ಕಡಕೂಟದ ವತಿಯಿಂದ ಕಾವೇರಿ ಚಂಗ್ರಾಂದಿ ಯಾತ್ರೆಯನ್ನು ತಾ. 17ರಂದು ಕೈಗೊಳ್ಳಲಾಗುವದೆಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಕೊಡವರ ಕುಲದೇವರಾದ ಕಾವೇರಿ ಮಾತೆಯ ಉಗಮ ಸ್ಥಾನದಲ್ಲಿ ತಾ.17ರಂದು ನಡೆಯವ ತೀರ್ಥೋದ್ಭವದಂದು ಮಡಿಕೇರಿಯಿಂದ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿ ದುಡಿಕೊಟ್ಟ್ ಹಾಡಿನೊಂದಿಗೆ ತಲಕಾವೇರಿಗೆ ತೆರಳಿ ತೀರ್ಥವನ್ನು ತರುತ್ತಿದ್ದಾರೆ.

ಈ ವರ್ಷ ಮಧ್ಯಾಹ್ನ 12.33ರ ಸಮಯದಲ್ಲಿ ಪವಿತ್ರ ತೀರ್ಥೋದ್ಭವ ವಾಗುವದರಿಂದ ಕೊಡವ ಮಕ್ಕq Àಕೂಟದಿಂದ ತೆರಳುವದಾಗಿ ವಿವರಿಸಿದ್ದಾರೆ.