ಭಾಗಮಂಡಲ, ಅ. 10: ತಾ. 17ರ ಕಾವೇರಿ ತೀರ್ಥೋದ್ಭವಕ್ಕೆ ಭರದ ಪೂರ್ವ ತಯಾರಿ ನಡೆಯುತ್ತಿದೆ. ಭಾಗಮಂಡಲ ಹಾಗೂ ತಲಕಾವೇರಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. ಬ್ಯಾರಿಕೇಡ್ ಹಾಗೂ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಆದರೆ ಹೈಮಾಸ್ಟ್ ದೀಪ ಮಾತ್ರ ಹಲವು ಕಾಲದಿಂದ ದುರಸ್ತಿಗೊಂಡಿದ್ದು, ಜಾತ್ರೆ ಸಮಯದಲ್ಲೂ ಇನ್ನೂ ಬೆಳಗದಿರುವದು ವಿಪರ್ಯಾಸಕರ. ಈ ಬಗ್ಗೆ ಸಂಬಂಧಿಸಿದವರು ಕೂಡಲೇ ಗಮನಹರಿಸುವಂತೆ ನಾಗರಿಕರು ಕೋರಿದ್ದಾರೆ.