ಸುಂಟಿಕೊಪ್ಪ, ಅ. 11: ಇಲ್ಲಿನ ಗೌಡ ಸಂಘ ಸುಂಟಿಕೊಪ್ಪ ನಾಡುವಿನ ವತಿಯಿಂದ ಭಾನುವಾರ ಸಂತ ಮೇರಿ ಸಭಾಂಗಣದಲ್ಲಿ ನಡೆದ 3ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ಔತಣಕೂಟ ಸಮಾರಂಭದಲ್ಲಿ ಹಲವಾರು ರಂಗದಲ್ಲಿ ಸಾಧನೆ ಮಾಡಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುಂಟಿಕೊಪ್ಪ ಹೋಬಳಿಯ ಪ್ರಗತಿಪರ ಕೃಷಿಕ ಪುಂತೋಳಿ ಚಂಗಪ್ಪ, ಬಾಸ್ಕೆಟ್ ಬಾಲ್ ಆಟಗಾರ್ತಿ ಮತ್ತು ಏಕಲವ್ಯ ಪ್ರಶಸ್ತಿ ವಿಜೇತೆ ಪಟ್ಟೆಮನೆ ನವನೀತ ಮತ್ತು ಕಾಲ್ಚೆಂಡು ಪಂದ್ಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಟ್ರಮಾಡ ರಮ್ಯ, ಎನ್‍ಸಿಸಿ ಮೂಲಕ ಸೈನಿಕ ಹುದ್ದೆಗೆ ನೇಮಕವಾಗಲಿರುವ ಅದುಮನೆ ಮದುಶ್ರೀ, ಹಲವಾರು ವಸ್ತುಗಳ ಸಂಗ್ರಹಣೆ ಹವ್ಯಾಸ ಇಟ್ಟುಕೊಂಡಿರುವ ಕುದುಪಜೆ ಹವ್ಯಾಸ್, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ಕೊಳಂಬೆ ವಚನ, ದೀಕ್ಷಾ, ಶಾಂತನ ಇಂಧು, ಅಶ್ವಿನ್ ಚಂದ್ರಶೇಖರ್, ಪಡುನೊಳನ ಪ್ರಜ್ವಲ್, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕಡ್ಯದ ಪುಣ್ಯ, ಕುಯ್ಯಮುಡಿ ಹೇಮಂತ್ ಕುಮಾರ್, ಚೊಕ್ಕಡಿ ಕಲ್ಪಿತ, ಓಡಿಯಪ್ಪನ ಹರ್ಷಿತ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.