ಸುಂಟಿಕೊಪ್ಪ, ಅ. 11: ಸುಂಟಿಕೊಪ್ಪ ಬಿ.ಆರ್. ಅಂಬೇಡ್ಕರ್ ಭವನ ಸಮಿತಿ ವತಿಯಿಂದ 62ನೇ ವರ್ಷದ ಬಾಬಾ ಸಾಹೇಬ ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸುರೇಶ್ ಮಹೇಶ್ ಮಾಹಿತಿ ನೀಡಿದರು.

1956 ರಲ್ಲಿ ಡಾ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು, ಅದರ ನೆನಪಿಗಾಗಿ ತಾ. 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಭವನ ಸಮಿತಿ ಸಲಹೆಗಾರ ಹೆಚ್.ಪಿ. ಶಿವಕುಮಾರ್, ಉಪಾಧ್ಯಕ್ಷ ಎಸ್.ಎನ್. ಸಾವಿತ್ರಿ, ಕಾರ್ಯದರ್ಶಿ ಕಾವೇರಪ್ಪ, ಖಜಾಂಚಿ ಹೆಚ್.ಎ. ಮಂಜುನಾಥ್, ನಿರ್ದೇಶಕ ಸಿ. ಚಂದ್ರನ್, ಸದಸ್ಯರಾದ ಬಿ. ವಾಸು, ಅಂಜನ್ ಕುಮಾರ್, ರವಿಶಂಕರ್, ಸಂತೋಷ್ ಮಹೇಶ್, ಗಣೇಶ್ ಇದ್ದರು.