11ಬಿ ನಮೂನೆ-ಕ್ರಮಕ್ಕೆ ಆಗ್ರಹಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ಬಿಜೆಪಿ ಎಸ್‍ಸಿ ಯುವ ಮೋರ್ಚಾ ಆರೋಪಿಸಿದೆ.

ಕೆಲವು ಸಂಘಟನೆಯ ಪ್ರಮುಖರು ಈ ಹಿಂದೆ ಗ್ರಾ.ಪಂ.ಗೆ ಮಾಹಿತಿ ಹಕ್ಕಿನ ಮೂಲಕ ನಿಜಾಂಶವನ್ನು ತಿಳಿದು ಸೆ.23 ರಂದು ಗ್ರಾಮಸಭೆಯಲ್ಲಿ ನಕಲಿ 11ಬಿ ನಮೂನೆಯನ್ನು ವಿತರಿಸಿರುವ ಬಗ್ಗೆ ಪ್ರಸ್ತಾಪಿಸಿ ಗಂಭೀರ ಚರ್ಚೆ ನಡೆದು ಸಮರ್ಪಕವಾದ ಉತ್ತರ ಗ್ರಾಮ ಸಭೆಯಲ್ಲಿ ದೊರಕಲಿಲ್ಲ. ಗ್ರಾಮದ ಜನರ ಸಮಸ್ಯೆಯನ್ನು ಆಲಿಸದ ಈ ಗ್ರಾಮಸಭೆ ಕೇವಲ 11ಬಿ ಗೊಂದಲದಿಂದ ಮುಂದೂಡಲ್ಪಟ್ಟ ಘಟನೆಯೂ ನಡೆದಿದೆ. ಆದರೆ ಇದಕ್ಕೆ ಸಂಬಂಧಪಟ್ಟವರು ತಲೆ ಕೆಡಿಸಿಕೊಳ್ಳದಿರುವದು ವಿಷಾದನೀಯ ಎಂದು ಪತ್ರಿಕಾ ಹೇಳಿಕೆಯ ಮೂಲಕ ಆರೋಪಿಸಿದ್ದಾರೆ.

ಈ ಕೂಡಲೇ ತನಿಖೆಯನ್ನು ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಂಟಿಕೊಪ್ಪ ಯುವ ಮೋರ್ಚಾ ಎಸ್‍ಸಿ ಘಟಕದ ಅಧ್ಯಕ್ಷ ಹೊನ್ನಪ್ಪ, ಕಾರ್ಯದರ್ಶಿ ಲೋಕೇಶ್, ಶ್ರೀದೇವಿ-ನಾರ್ಗಾಣೆ ಬೂತ್ ಅಧ್ಯಕ್ಷ ವಾಸು ಇತರರು ಆಗ್ರಹಿಸಿದ್ದಾರೆ.