ಮಡಿಕೇರಿ, ಅ. 12: ತಾ.14 ರಂದು ಪೂರ್ವಾಹ್ನ 10 ಗಂಟೆಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಸಿ.ಎನ್.ಸಿ ವತಿಯಿಂದ ಜನಜಾಗೃತಿ ಸಭೆ ಏರ್ಪಡಿಸಲಾಗಿದೆ.

ಕೊಡವರ ಸ್ವಾತಂತ್ರ್ಯದ ಅನ್ವೇಷಣೆಯ ಗುರಿಯಾದ ಕೊಡವ ಲ್ಯಾಂಡ್ ಹಕ್ಕೊತ್ತಾಯದ 27 ನೇ ವರ್ಷದ ಸಮಾವೇಷವಾಗಿ ಮಡಿಕೇರಿಯಲ್ಲಿ ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿರುವ ಕೊಡವ ನ್ಯಾಷನಲ್ ಡೇ ಸಂಬಂಧ ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನಾಚಪ್ಪ ತಿಳಿಸಿದ್ದಾರೆ.

ಸಿ.ಎನ್.ಸಿ ಸಂಘಟನೆ 27ನೇ ವರ್ಷದ ಕೊಡವ ನ್ಯಾಷನಲ್ ಡೇ ಯನ್ನು ನವೆಂಬರ್ 24 ರಿಂದ 26 ರವರೆಗೆ ನಡೆಸುವ ಉದ್ದೇಶದಿಂದ ಮಡಿಕೇರಿಯಲ್ಲಿ ಬೃಹತ್ ರ್ಯಾಲಿ ನಡೆಸಲಿರುವದಾಗಿ ಅವರು ತಿಳಿಸಿದ್ದಾರೆ.