ಗೋಣಿಕೊಪ್ಪಲು, ಅ. 12: ಅಂಗವೈಕಲ್ಯದ ನಡುವೆ ಕೃಷಿಯಲ್ಲಿ ತೊಡಗಿಕೊಂಡಿರುವ ಸುಳುಗೋಡು ಗ್ರಾಮದ ಕೃಷಿಕ ಪೊನ್ನಿಮಾಡ ಕಟ್ಟಿ ಅವರು ಬೆಳೆದಿರುವ ಭತ್ತದ ನಾಟಿಯನ್ನು ಕಾಡಾನೆಗಳು ಸಂಪೂರ್ಣ ನಾಶ ಪಡಿಸಿರುವದರಿಂದ ಅರಣ್ಯ ಇಲಾಖೆ ದುಪ್ಪಟ್ಟು ಪರಿಹಾರ ನೀಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ. ರೈತ ಸಂಘದ ಸುಜಯ ಬೋಪಯ್ಯ, ಪುಚ್ಚಿಮಾಡ ಸುಭಾಷ್ ಇತರರು ಮಾಹಿತಿ ಅರಿತು ಗದ್ದೆಗೆ ಭೇಟಿ ನೀಡಿ ಬೆಳೆ ಹಾನಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ತಿತಿಮತಿ ಆರ್‍ಎಫ್‍ಒ ಅಶೋಕ್ ಅವರನ್ನು ಒತ್ತಾಯಿಸಿದರು.