ನಾಪೆÇೀಕ್ಲು, ಅ. 12: ಇತ್ತೀಚಿಗೆ ವಿಯಾಟ್ನಂನಿಂದ ಕಾಳುಮೆಣಸು ಆಮದು ಮಾಡಿಕೊಂಡು ಕೊಡಗಿನ ಕಾಳುಮೆಣಸಿನೊಂದಿಗೆ ಬೆರೆಸಿ ಮಾರಾಟ ಮಾಡುವದರ ವಿರುದ್ಧ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕಕ್ಕಬೆ ಫಾರ್ಮರ್ಸ್ ಕ್ಲಬ್ ಅಧ್ಯಕ್ಷ ಕೋಟೆರ ಸುರೇಶ್ ಚಂಗಪ್ಪ ಹೇಳಿದರು.

ಸಂಘದಲ್ಲಿ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಕ್ಲಬ್‍ನ ಕಾರ್ಯದರ್ಶಿ ಅನ್ನಾಡಿಯಂಡ ದಿಲೀಪ್, ಬಾಚಮಂಡ ವಿಠಲ್ ಕಾವೇರಪ್ಪ, ಕಲಿಯಂಡ ನವೀನ್ ಅಯ್ಯಣ್ಣ, ಕಲ್ಯಾಟಂಡ ರಘು ತಮ್ಮಯ್ಯ, ಅರೆಯಡ ಜೀವನ್ ದೇವಯ್ಯ, ಕಲ್ಯಾಟಂಡ ಸುದಾ ಗಣಪತಿ, ಸದಸ್ಯರು ಇದ್ದರು.