ಮಡಿಕೇರಿ, ಅ. 12: ವೀರಾಜಪೇಟೆಯಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಕೆ.ಜೆ. ತನುಷ್, ನಿಹಾರಿಕಾ ತಂಗಮ್ಮ, ಪಿ.ಎಸ್. ಪೂವಣ್ಣ, ಗಾಯನ ಗೌರಮ್ಮ, ಎಂ.ಬಿ. ಮೌನ, ಎ.ಎಸ್. ಗಣಪತಿ ಹಾಗೂ ಪಿ.ಎ. ಅಯ್ಯಪ್ಪ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಪ್ರಾಶುಂಪಾಲ ಪಿ.ಎನ್. ವಿನೋದ್, ಮುಖ್ಯ ಶಿಕ್ಷಕಿ ಬಿ.ಯು. ಪೊನ್ನಮ್ಮ, ಕರಾಟೆ ಶಿಕ್ಷಕ ಕೆ.ಪಿ. ಸೋಮಣ್ಣ ಹಾಗೂ ಸಹ ಶಿಕ್ಷಕಿ ಪಿ.ಯು. ಪಾರ್ವತಿ ಹಾಜರಿದ್ದರು.