ಮಡಿಕೇರಿ, ಅ. 12: ಶ್ರೀ ವಿನಾಯಕ ಕೊಡವಕೇರಿ, ಮಡಿಕೇರಿಯ ಕೈಲ್‍ಪೊಳ್ದ್ ಸಂತೋಷಕೂಟ ಚೊಟ್ಟೆಯಂಡ ಕೆ. ಅಪ್ಪಾಜಿ ಅಧ್ಯಕ್ಷತೆಯಲ್ಲಿ ಜರುಗಿತು. ಬೆಳಿಗ್ಗೆ ಆಟೋಟ ಪೈಪೋಟಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ನೆರವಂಡ ಅನೂಷ್ಕ ಪೂವಯ್ಯ ಪ್ರಾರ್ಥನೆ ಬಳಿಕ ಅಧ್ಯಕ್ಷರು ಮಾತನಾಡಿ, ಕೊಡವ ಆಚಾರ - ವಿಚಾರ, ಬಾಳುಗೋಡುವಿನ ಕೊಡವ ನಮ್ಮೆ, ಹರದಾಸ ಅಪ್ಪಚ್ಚಕವಿಯ 150ನೇ ಹುಟ್ಟು ಹಬ್ಬ ಇವುಗಳ ಆಚರಣೆಯಲ್ಲಿ ಕೇರಿಯ ಸದಸ್ಯರು ಸಹಕರಿಸುವಂತೆ ವಿನಂತಿಸಿದರು.

ಕಾರ್ಯದರ್ಶಿ ಬಲ್ಯಂಡ ವಿಜು ನಂಜಪ್ಪ ಸಂತೋಷಕೂಟಕ್ಕೆ ಆರ್ಥಿಕ ಉದಾರತೆÉ ತೋರಿದವರ ವಿವರ ನೀಡಿದರು. ಬಹುಮಾನ ವಿತರಣಾ ನಂತರ ಕೇರಿ ಉಪಾಧ್ಯಕ್ಷ ಅಪ್ಪಂಡೇರಂಡ ಸನ್ನಿ ಪೂಣಚ್ಚ ವಂದಿಸಿದರು.