ನಾಪೋಕ್ಲು, ಅ. 13: ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಿಶೇಷ ವಾರ್ಷಿಕ ಶಿಬಿರವನ್ನು ಸಣ್ಣಪುಲಿಕೋಟು ಗ್ರಾಮದ ಮೇಲ್ಕಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಏಳು ದಿನಗಳಿಂದ ಹಮ್ಮಿಕೊಂಡಿದ್ದು ಸಮಾರೋಪ ಸಮಾರಂಭವನ್ನು ಶಾಲೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀಪ್ರಕಾಶ್ ವಹಿಸಿದ್ದು ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಕುಯ್ಯಮುಡಿ ಅಶ್ವಿನಿಕುಮಾರ್ ಭಾಗವಹಿಸಿ ಹಿತವಚನ ನೀಡಿದರು.

ಕಾರ್ಯಕ್ರಮದಲ್ಲಿ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಾ, ಸದಸ್ಯರಾದ ಪದ್ಮಿನಿ, ಸುಮಿತ್ರಾ, ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹದೇವ್, ಮೇಲುಕಟ್ಟು ಶಾಲೆಯ ಮುಖ್ಯ ಶಿಕ್ಷಕಿ ಹೊಸಗದ್ದೆ ಕಲ್ಪನ, ಭಾಗಮಂಡಲದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಆಚೀರ ನಾಣಯ್ಯ, ಶಿಬಿರಾಧಿಕಾರಿ ಕೆ.ಆರ್. ರಮೇಶ್, ಸಹಶಿಬಿರಾಧಿಕಾರಿ ಪಿ.ಎನ್.ರೋಹಿತ್, ಉಪನ್ಯಾಸಕ ಬಿ.ಡಿ. ಗಣೇಶ್ ಉಪಸ್ಥಿತರಿದ್ದರು. ಶಿಬಿರಾರ್ಥಿ ಜೆ.ಆರ್. ಚಂದ್ರಶೇಖರ್ ಸ್ವಾಗತಿಸಿ, ಶಿಬಿರಾಧಿಕಾರಿ ಕೆ.ಆರ್. ರಮೇಶ್ ಪ್ರಾಸ್ತಾವಿಕ ನುಡಿಯಾಡಿ ವಿ.ಎಸ್. ಅನನ್ಯ ವಂದಿಸಿದರು. - ದುಗ್ಗಳ