ಸೋಮವಾರಪೇಟೆ, ಅ. 14: ಕೊಡ್ಲಿಪೇಟೆಯ ಟಿಪ್ಪು ಯುವಕ ಸಂಘದ ಅಧ್ಯಕ್ಷರಾಗಿ ಔರಂಗಜೇಬ್ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.ಸಂಘದ ಉಪಾಧ್ಯಕ್ಷರಾಗಿ ಕೆ.ಎಂ. ವಹಾಬ್, ಕಾರ್ಯದರ್ಶಿಯಾಗಿ ಎಂ.ಬಿ. ಸಮೀವುಲ್ಲಾ, ಸಹ ಕಾರ್ಯದರ್ಶಿಯಾಗಿ ಮಹಬೂಬ್ ಪಾಷ, ಖಜಾಂಚಿಯಾಗಿ ಮುಸರತ್ ಪಾಷ ಆಯ್ಕೆಯಾಗಿದ್ದು. 25 ಮಂದಿಯನ್ನು ಸಮಿತಿ ಸದಸ್ಯರುಗಳನ್ನಾಗಿ ನೇಮಿಸಲಾಗಿದೆ ಎಂದು ಕಾರ್ಯದರ್ಶಿ ಸಮೀವುಲ್ಲಾ ತಿಳಿಸಿದ್ದಾರೆ.