ಭಾಗಮಂಡಲ, ಅ. 13: ಭಾಗಮಂಡಲದಿಂದ ತಲಕಾವೇರಿವರೆಗೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಭಾಗಮಂಡಲ ಗ್ರಾ.ಪಂ. ಸದಸ್ಯ ಪುರುಷೋತ್ತಮ್ಮ ಚಾಲನೆ ನೀಡಿದರು. ಸದಸ್ಯರಾದ ರಾಜಾರೈ, ಯೋಗಾನಂದ, ಭಾಸ್ಕರ, ಪಿಡಿಓ ಅಶೋಕ್, ಶಿಕ್ಷಕರಾದ ಶ್ರೀಧರ್, ರಂಜಿತ್, ಜಯಪ್ರಕಾಶ್, ಪುನೀತ್, ಶಿವಣ್ಣ, ಶ್ವೇತ ಚಂಗಪ್ಪ ಮತ್ತಿತರರು ಇದ್ದರು. ಭಾಗಮಂಡಲ ಕೆವಿಜಿ ಐಟಿಐ, ವಾಜಪೇಯಿ ವಸತಿ ಶಾಲೆ ಜ್ಞಾನೋದಯ ಶಾಲೆಗಳ 150ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.