ಮಡಿಕೇರಿ, ಅ. 13 : ನೆಹರು ಯುವ ಕೇಂದ್ರ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಮದೆ ಗ್ರಾ.ಪಂ., ತಾಳತ್ತಮನೆ ನೇತಾಜಿ ಯುವತಿ ಮಂಡಳಿ ಹಾಗೂ ನೇತಾಜಿ ಯುವಕ ಮಂಡಲ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ತಾ.15 ರಂದು ನಡೆಯಲಿದೆ.ಮಡಿಕೇರಿ - ಮಂಗಳೂರು ರಸ್ತೆ, ಭಾಗಮಂಡಲ ರಸ್ತೆ ಬದಿಯ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಸ್ವಚ್ಛಗೊಳಿಸುವ ಶ್ರಮದಾನವು ಭಾನುವಾರ ಬೆಳಿಗ್ಗೆ 9.30 ಆರಂಭವಾಗಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಶ್ರಮದಾನಕ್ಕೆ ಚಾಲನೆ ನೀಡಲಿದ್ದು, ಮದೆ ಗ್ರಾ.ಪಂ. ಅಧ್ಯಕ್ಷ ಎಂ.ಬಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಪಾಲ್ಗೊಳ್ಳಲಿದ್ದಾರೆ. ಮನೆ, ಅಂಗಡಿ, ಹೊಟೇಲ್, ವಸತಿ ಗೃಹ, ವಾಣಿಜ್ಯ ಸಂಕೀರ್ಣ, ಹೋಂಸ್ಟೇಗಳಲ್ಲಿ ತ್ಯಾಜ್ಯವನ್ನು ನೀಡುವಾಗ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ನೀಡುವಂತೆ ಬಿ.ಬಿ.ದಿವೇಶ್ ರೈ ಮನವಿ ಮಾಡಿದ್ದಾರೆ.