ಮಡಿಕೇರಿ, ಅ. 13 : ಗುಂಡಿ ಬಿದ್ದ ರಸ್ತೆಯನ್ನು ಕೂಡಲೇ ದುರಸ್ತಿಪಡಿಸಬೇಕಂದು ಆಗ್ರಹಿಸಿ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ ಘಟನೆ ನಡೆದಿದೆ.

ಭಾಗಮಂಡಲ - ಮಡಿಕೇರಿ - ತಲಕಾವೆರಿ ರಸ್ತೆ ತೀರಾ ಹಾಳಾಗಿದ್ದು, ಮೊನ್ನೆಯಷ್ಟೇ ಗುಂಡಿಗೆ ಜಲ್ಲಿಕಲ್ಲು ಹಾಗೂ ಕಲ್ಲುಪುಡಿ ಹಾಕಿ ಮುಚ್ಚುವ ನಾಟಕ ಮಾಡಲಾಗಿದೆ. ಇದೀಗ ಕಲ್ಲುಗಳು ಕಿತ್ತು ಬಂದು ರಸ್ತೆಯಲ್ಲೆಲ್ಲ ಹರಡಿದ್ದು, ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳ ಸಂಚಾರಕ್ಕೆ ದುಸ್ತರವಾಗಿದೆ. ಇನ್ನೆರಡು ದಿನಗಳ ಡಾಮರು ಹಾಕಿ ದುರಸ್ತಿಪಡಿಸ ಬೇಕೆಂದು ಒತ್ತಾಯಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು. ಇಲ್ಲವಾದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸುವದಾಗಿ ಎಚ್ಚರಿಸಿದರು. ಕಾವೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಭಾಸ್ಕರ, ಸಿರಕಜೆ ಭವನ್, ಪುನಿತ್, ಕೃಷ್ಣ, ವೆಂಕಟರಮಣ ಇತರರು ಪಾಲ್ಗೊಂಡಿದ್ದರು.