ಮಡಿಕೇರಿ, ಅ. 13: 36ನೇ ವಾರ್ಷಿಕ ಕ್ರೀಡೋತ್ಸವವನ್ನು ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಅಧ್ಯಕ್ಷತೆ ಮತ್ತು ಕ್ರೀಡೋತ್ಸವ ಸಮಿತಿ ಸದಸ್ಯರ ಸಮ್ಮುಖದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಅನ್ನಡಿಯಂಡ ದಿಲಿಪ್ ಕುಮಾರ್ ಮತ್ತು ಚಂಡೀರ ಡಿ. ದೇವಯ್ಯ ಭಾಗವಹಿಸಿದ್ದರು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪ್ರಥಮ ಮಾಳೆಯಂಡ ಪ್ರದೀಪ್, ದ್ವಿತೀಯ ಚೀಯಕಪೂವಂಡ ಚೇತನ್ ಬಹುಮಾನ ಗಳಿಸಿದರು. ಪ್ರೌಢಶಾಲಾ ಬಾಲಕ-ಬಾಲಕಿಯರಿಗೆ 1500 ಮೀ. ಓಟ, ಮಹಿಳೆಯರಿಗೆ ಮತ್ತು ಮಹನೀಯರಿಗೆ ಹಗ್ಗಜಗ್ಗಾಟ, ದಂಪತಿಗಳಿಗೆ ಸಂಗೀತ ಕುರ್ಚಿ, ಕೇರಂ ಪಂದ್ಯಾಟ, ಮೂರು ಕಾಲಿನ ಓಟ ನಡೆಯಿತು.

ಮಹನೀಯರಿಗೆ ಭಾರದ ಗುಂಡು ಎಸೆತ, ಕಣ್ಣು ಕಟ್ಟಿ ಮಡಿಕೆ ಹೊಡೆಯುವದು, ಗೋಣಿ ಚೀಲದ ಓಟ, ಗೋಣಿ ಚೀಲ ಗುದ್ದಾಟ, ಇನ್ನು ಹಲವು ಆಟೋಟ ಸ್ಪರ್ಧೆಗಳು ಜನರ ಗಮನಸೆಳೆದವು. ಮಧ್ಯಾಹ್ನ ಊಟದ ನಂತರ ಸಭಾ ಕಾರ್ಯಕ್ರಮ ನಡೆಯಿತು. ಅತಿಥಿಗಳು ಹಿತನುಡಿಗಳನ್ನು ಹೇಳುವದರೊಂದಿಗೆ ಬಹುಮಾನವನ್ನು ವಿತರಿಸಿದರು.