ಭಾಗಮಂಡಲ, ಅ. 14: ಜಿಲ್ಲಾ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಭಾಗಮಂಡಲದಲ್ಲಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ತ್ರಿವೇಣಿ ಸಂಗಮ ಬಳಿಯಿಂದ ಮಾರುಕಟ್ಟೆವರೆಗೆ ಸ್ವಚ್ಛ ಮಾಡಲಾಯಿತು. ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ, ತಾಲೂಕು ಅಧ್ಯಕ್ಷ ಧನಂಜಯ, ಮಹಿಳಾ ಮೋರ್ಚಾ ಮಡಿಕೇರಿ ನಗರಾಧ್ಯಕ್ಷೆ ಅನಿತಾ ಪೂವಯ್ಯ, ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ, ಡೀನ್ ಬೋಪಣ್ಣ, ಸರಸು, ಗ್ರಾ.ಪಂ. ಸದಸ್ಯರಾದ ಪುರುಷೋತ್ತಮ, ಪಟ್ರಮಾಡ ಸಂಜು ಇನ್ನಿತರರಿದ್ದರು.