ಸೋಮವಾರಪೇಟೆ, ಅ.15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೇಳೂರು ವಿಭಾಗದ ಬಜೆಗುಂಡಿ ಒಕ್ಕೂಟದ ವತಿಯಿಂದ ಬಳಗುಂದ ಗ್ರಾಮದಲ್ಲಿ ನೂತನವಾಗಿ ಶ್ರೀ ದುರ್ಗಾಪರಮೇಶ್ವರಿ ಪ್ರಗತಿಬಂಧು ಸ್ವಸಹಾಯ ಸಂಘವನ್ನು ರಚಿಸಲಾಯಿತು.

ಯೋಜನೆಯ ಶಾಂತಳ್ಳಿ ವಲಯ ಮೇಲ್ವಿಚಾರಕಿ ರೇವತಿ ಸಂಘದ ಸದಸ್ಯರುಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಬೇಳೂರು ಒಕ್ಕೂಟದ ಅಧ್ಯಕ್ಷೆ ದಿವ್ಯ, ಸೇವಾ ಪ್ರತಿನಿಧಿ ಪುಷ್ಪಾವತಿ, ಸ್ವಸಹಾಯ ಸಂಘದ ಸದಸ್ಯರುಗಳಾದ ಸಿ. ಮಹೇಶ್, ಬಿ.ಕೆ. ಪವನ್, ಶಾಂತರಾಜು, ಕಿಶೋರ್ ಕುಮಾರ್, ಆರ್. ಮಹೇಶ್, ಸುರೇಶ್ ಉಪಸ್ಥಿತರಿದ್ದರು.