ವೀರಾಜಪೇಟೆ, ಅ. 15: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ನಿಧಿಯ ಅನುದಾನದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕೋಪ ಯೋಗಿ ಇಲಾಖೆಯ ಸಹಾಯಕ ಅಭಿಯಂತರ ಲಿಂಗರಾಜು ಉಸ್ತು ವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಪರಿಶೀಲನೆ ನಡೆಸಿದರು. ಅಮ್ಮತ್ತಿ ವಿಭಾಗದಲ್ಲಿ ಸುಮಾರು 54 ಲಕ್ಷ ರೂ. ಗಳ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆನಂದಪುರ- ಪಾಲಿಬೆಟ್ಟ ರಸ್ತೆ, ಮುತ್ತಪ್ಪ ದೇವಸ್ಥಾನ ರಸ್ತೆ, ಮೇ ಫ್ಲವರ್ ರಸ್ತೆ, ಗೌರಿ ವಿಜಯನ್ ಮಾಸ್ಟರ್ ರಸ್ತೆ, ಕಲ್ಲುಕೋರೆ ಮಸೀದಿ ರಸ್ತೆ, ಕಾರ್ಮಾಡು ವಿಭಾಗದಲ್ಲಿ ರಾಮಮಂದಿರದಿಂದ ಹಿಂದೂ ರುದ್ರಭೂಮಿ-ಮುಸಲ್ಮಾನರ ರುದ್ರಭೂಮಿ ರಸ್ತೆ, ಹರಿಜನರ ಸ್ಮಶಾನ ರಸ್ತೆ, ಬ್ರಿಗೇಡಿಯರ್ ಮಾದಪ್ಪ ಅವರ ಮನೆ ಮುಂದೆ ಹಾದು ಹೋಗುವ ಸಾರ್ವಜನಿಕ ರಸ್ತೆ, ಮಾಚಿಮಂಡ ಜಗನ್ ಮನೆ ಮುಂದೆ ಹಾದು ಹೋಗುವ ಸಾರ್ವಜನಿಕ ರಸ್ತೆಯ ಗುಣಮಟ್ಟಕ್ಕೆ ಒತ್ತು ನೀಡುವಂತೆ ಗುತ್ತಿಗೆದಾರರಿಗೆ ಹರೀಶ್ ಬೋಪಣ್ಣ ನಿರ್ದೇಶನ ನೀಡಿದರು.

ಕಾಂಗ್ರೆಸ್ ಪಕ್ಷದ ಅಮ್ಮತ್ತಿ ಅಧ್ಯಕ್ಷ ಕುಟ್ಟಂಡ ಕೃಷ್ಣ, ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಹಂಸ, ಸರೋಜಿನಿ ಮಂಜು, ರಾಮ್‍ದಾಸ್, ಮತ್ತಿತರರು ಉಪಸ್ಥಿತರಿದ್ದರು.