ಕುಶಾಲನಗರ, ಅ. 15: ಕುಶಾಲನಗರ ಕೇಂದ್ರವಾಗಿಸಿಕೊಂಡು ನೂತನ ತಾಲೂಕು ಹೋರಾಟ ಸಮಿತಿ ಆಶ್ರಯದಲ್ಲಿ ನಿರಂತರ ನಿರಶನ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು ಭಾನುವಾರ ಕುಶಾಲನಗರ ಕಾವೇರಿ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕುಶಾಲನಗರದ ಕಾರು ನಿಲ್ದಾಣದ ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ ತನಕ ನಿರಶನದಲ್ಲಿ ತೊಡಗಿಸಿಕೊಂಡರು. ಛಾಯಾಗ್ರಾಹಕರ ಸಂಘದ ಪ್ರಮುಖರಾದ ಶಾಂತಪ್ಪ, ಕೆ.ಎಸ್.ನಾಗೇಶ್ ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಕುಶಾಲನಗರದ ರಿಜಿಡ್ ಗ್ರೂಪ್‍ನ ಮಹಿಳಾ ಸದಸ್ಯರು ಕೂಡ ಈ ಸಂದರ್ಭ ನಿರಶನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭ ಹೋರಾಟ ಸಮಿತಿಯ ಕೇಂದ್ರ ಸಮಿತಿ ಸಂಚಾಲಕರಾದ ವಿ.ಪಿ.ಶಶಿಧರ್, ಆರ್.ಕೆ. ನಾಗೇಂದ್ರಬಾಬು, ಸ್ಥಾನೀಯ ಸಮಿತಿ ಪ್ರಮುಖರಾದ ಜಿ.ಎಲ್.ನಾಗರಾಜ್, ಟಿ.ಆರ್. ಶರವಣಕುಮಾರ್ ಮತ್ತಿತರರು ಇದ್ದರು. ಸೋಮವಾರ (ಇಂದು) ಸ್ಥಳೀಯ ಸಹಕಾರ ಸಂಘಗಳ ಪ್ರತಿನಿಧಿಗಳು ಸರದಿ ನಿರಶನದಲ್ಲಿ ಪಾಲ್ಗೊಳ್ಳಲಿದ್ದಾರೆ.