ನಾಪೆÇೀಕ್ಲು, ಅ. 14: ಹಳೇ ತಾಲೂಕಿನಲ್ಲಿ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ನಾಪೆÇೀಕ್ಲು ಭಗವತಿ ದೇವಳದ ಅಧ್ಯಕ್ಷ ಕುಲ್ಲೇಟಿರ ಮಾದಪ್ಪ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಭೂಮಿ ಪೂಜೆ ನೆರವೇರಿದರು.ಹಳೇ ತಾಲೂಕಿನಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕುಲ್ಲೇಟಿರ ಮಾದಪ್ಪ ಮತ್ತು ಅವರ ಪುತ್ರ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಲ್ಲೇಟಿರ ಅರುಣ್ ಬೇಬರವರು ಅಂಗನವಾಡಿ ನಿರ್ಮಿಸಲು ಸುಮಾರು 3 ಸೆಂಟು ಜಾಗವನ್ನು ಉದಾರವಾಗಿ ನೀಡಿದು,್ದ ಈ ಸ್ಥಳದಲ್ಲಿ ಸುಮಾರು 8 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಗೊಳ್ಳಲಿದೆ. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬ ತಿಮ್ಮಯ್ಯ, ಸದಸ್ಯರಾದ ಮಹಮ್ಮದ್ ಖುರೇಶಿ, ಟಿ.ಎ. ಮಹಮ್ಮದ್, ಕುಲ್ಲೇಟಿರ ಜ್ಯೋತಿ ನಾಚಪ್ಪ, ಚಿಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಬೊಪ್ಪಂಡ ಯಶೋದ, ಬೊಪ್ಪಂಡ ಬೇಬಿ, ಪಾಡಿಯಮ್ಮಂಡ ಯೋಗಿಸ್, ಎಂ.ಸಿ. ನಾಗರಾಜ್, ಬೊಪ್ಪಂಡ ವೇಣು ಸುಬ್ಬಯ್ಯ ಇದ್ದರು.