ಮಡಿಕೇರಿ, ಅ. 17: ಇತ್ತೀಚೆಗೆ ಮಡಿಕೇರಿ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಗಾಳಿಬೀಡು ನವೋದಯ ವಿದ್ಯಾಲಯದ ಆರನೇ ತರಗತಿ ವಿದ್ಯಾರ್ಥಿ ಕೆ.ಕೆ. ಹವ್ಯಾಸ್ ಪ್ರಥಮ ಸ್ಥಾನದೊಂದಿಗೆ ಪುರಸ್ಕಾರಗಳಿಸಿದ್ದಾನೆ. ತಾ. 14ರಂದು ಸ್ವಚ್ಛಭಾರತ ಅಭಿಯಾನ ಸಲುವಾಗಿ ಲಯನ್ಸ್ ಸಂಸ್ಥೆ ವೀರಾಜಪೇಟೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿಯೂ ಕೂಡ ಪ್ರಥಮ ಬಹುಮಾನ ಹಾಗೂ ನಗದು ಗಳಿಸಿದ್ದು, ಈತ ಮಡಿಕೇರಿಯ ವಿಮಾ ಏಜೆಂಟ್ ಕೆ.ಸಿ. ಕೇಶವ ಹಾಗೂ ನರ್ಸ್ ಲೋಲಾಕ್ಷಿ ದಂಪತಿಯ ಪುತ್ರ.