ಗೋಣಿಕೊಪ್ಪಲು, ಅ. 20 : ವೀರಾಜಪೇಟೆ ತಾಲೂಕು ಅಂಗನವಾಡಿ ನೌಕರರ ಸಂಘದ ವಾರ್ಷಿಕ ಸಮಾವೇಶ ತಾ. 22 ರಂದು ಇಲ್ಲಿನ ಆನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿ.ಎಸ್ ಸುಮಿತ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಅಂದು ಬೆ. 10.30 ಕ್ಕೆ ನಡೆಯುವ ಸಮಾವೇಶವನ್ನು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರ. ಕಾರ್ಯದರ್ಶಿ ಹೆಚ್. ಎಸ್. ಸುನಂದ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿüಗಳಾಗಿ ಜಿಲ್ಲಾ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಚೇಂದಿರ ಕಾವೇರಮ್ಮ, ಜಿಲ್ಲಾಧ್ಯಕ್ಷ ದುರ್ಗಾಪ್ರಸಾದ್, ಪ್ರ. ಕಾರ್ಯದರ್ಶಿ ಹೆಚ್. ಬಿ. ರಮೇಶ್, ಜಿಲ್ಲಾ ವರ್ಕಸ್ರ್ಸ್ ಯೂನಿಯನ್ ಕಾರ್ಯದರ್ಶಿ ಎ. ಮಹದೇವ್, ಜಿಲ್ಲಾ ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಪಿ. ಆರ್. ಭರತ್, ವೀರಾಜಪೇಟೆ ತಾಲೂಕು ಕ್ಷೇಮ ನಿಧಿ ಅಧ್ಯಕ್ಷೆ ಬಿ. ಕೆ. ಸರೋಜ ಭಾಗವಹಿಸಲ್ಲಿದ್ದಾರೆ. ಈ ಸಂದರ್ಭ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಕಾರ್ಯಕರ್ತೆ ಯರನ್ನು ಸನ್ಮಾನಿ ಸಲಾಗುವದು ಎಂದು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿ.ಎಸ್ ಸುಮಿತ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.