ಕುಶಾಲನಗರ, ಅ. 20: ಕುಶಾಲನಗರವನ್ನು ಕಾವೇರಿ ತಾಲೂಕಾಗಿ ಪರಿಗಣಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸರಣಿ ನಿರಶನದ ಅಂಗವಾಗಿ ಕುಶಾಲನಗರದ ಜಾಮಿಯ ಹಾಗೂ ಹಿಲಾಲ್ ಮಸೀದಿ ಆಡಳಿತ ಮಂಡಳಿ ಆಶ್ರಯದಲ್ಲಿ ಧರಣಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ವೇದಿಕೆಯಲ್ಲಿ ಧರಣಿ ನಡೆಸಿದ ಮಸೀದಿ ಸಮಿತಿಗಳ ಪ್ರಮುಖರು ಕಾವೇರಿ ತಾಲೂಕಿಗೆ ಆಗ್ರಹಿಸಿ ಘೊಷಣೆಗಳನ್ನು ಕೂಗಿದರು. ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭ ಜಾಮಿಯ ಮಸೀದಿ ಸಮಿತಿ ಅಧ್ಯಕ್ಷ ಹಲೀಂ, ಹಿಲಾಲ್ ಮಸೀದಿ ಸಮಿತಿ ಕಾರ್ಯದರ್ಶಿ ರೆಹಮುಲ್ಲಾ, ಪ್ರಮುಖರಾದ ರಫೀಕ್, ಖಲೀಲ್, ಶಂಷುದ್ದೀನ್, ಅಜೀಜ್, ಅಯೂಬ್, ನಜೀರ್, ತನ್ವೀರ್, ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ. ಶಶಿಧರ್ ಮತ್ತಿತರರು ಇದ್ದರು.