ಸೋಮವಾರಪೇಟೆ, ಅ. 19: ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾಗಿ ಕೆ.ಕೆ. ರಮೇಶ್, ಉಪಾಧ್ಯಕ್ಷರಾಗಿ ಎಸ್.ಬಿ. ಯಶವಂತ್, ಕಾರ್ಯದರ್ಶಿಯಾಗಿ ಎನ್.ಪಿ. ರಾಜು ಆಯ್ಕೆಯಾಗಿದ್ದಾರೆ.

ಇಲ್ಲಿನ ಮಹಿಳಾ ಸಮಾಜದಲ್ಲಿ ಅಧ್ಯಕ್ಷ ಎಸ್.ಬಿ. ಲೀಲಾರಾಂ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಮಾಜದ ಸಹ ಕಾರ್ಯದರ್ಶಿಯಾಗಿ ಟಿ.ಕೆ. ಲೋಕೇಶ್, ಖಜಾಂಚಿಯಾಗಿ ಎಸ್.ಎನ್. ಹರೀಶ್ ನೇಮಕಗೊಂಡರು.

ಮಹಿಳಾ ಘಟಕದ ಅಧ್ಯಕ್ಷರಾಗಿ ಶಾಂತಿ ದೇವದಾಸ್, ಕಾರ್ಯದರ್ಶಿಯಾಗಿ ಸವಿತಾ ಸಂತೋಷ್, ಖಜಾಂಚಿಯಾಗಿ ಶೋಭಾ ಯಶ್ವಂತ್ ಅವರುಗಳನ್ನು ಆಯ್ಕೆಮಾಡಲಾಯಿತು. ವಿಶ್ವಕರ್ಮ ಪೂಜೆಯನ್ನು ಅರ್ಚಕ ವಿಘ್ನೇಶ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ನಾಮನಿರ್ದೇಶಿತ ಸದಸ್ಯ ಇಂದ್ರೇಶ್ ಅವರನ್ನು ಸನ್ಮಾನಿಸಲಾಯಿತು.