ಸೋಮವಾರಪೇಟೆ, ಅ.20: ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಐಎನ್‍ಟಿಯುಸಿ)ನ ವಿವಿಧ ಘಟಕಗಳಿಗೆ ಪದಾಧಿಕಾರಿ ಗಳನ್ನು ನೇಮಕ ಮಾಡಲಾಗಿದೆ ಎಂದು ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.

ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಿಲ್ಲೆ, ತಾಲೂಕು ಹಾಗೂ ನಗರ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಗಳನ್ನಾಗಿ ಚೌಡ್ಲು ಗ್ರಾಮದ ಸಿ.ಕೆ. ಅಶ್ರಫ್, ಎಂ.ಡಿ. ಬ್ಲಾಕ್‍ನ ಮೋಹನ್, ಯುವ ಘಟಕದ ಸಹಕಾರ್ಯದರ್ಶಿಯಾಗಿ ಚೌಡ್ಲು ಗ್ರಾಮದ ಸಿ.ವಿ. ಮಹಮ್ಮದ್ ಆಲಿ, ತಾಲೂಕು ಘಟಕದ ಕಾರ್ಯದರ್ಶಿ ಯಾಗಿ ಕಲ್ಕಂದೂರು ಗ್ರಾಮದ ಕೆ.ಎ. ಅಶ್ರಫ್, ಸಂಘಟನಾ ಕಾರ್ಯದರ್ಶಿ ಯಾಗಿ ಗಾಂಧಿ ನಗರದ ದುರ್ಗೇಶ್(ಚಿಕ್ಕಣ್ಣ) ಅವರುಗಳನ್ನು ನೇಮಕ ಮಾಡಲಾಗಿದೆ.

ಸೋಮವಾರಪೇಟೆ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ ರೇಂಜರ್ ಬ್ಲಾಕ್‍ನ ಮಹಮ್ಮದ್ ಶಫಿ, ಉಪಾಧ್ಯಕ್ಷರಾಗಿ ಚೌಡೇಶ್ವರಿ ಬ್ಲಾಕ್‍ನ ವಿ.ಕೆ. ಮಂಜುನಾಥ್ ಹಾಗೂ ವಕ್ತಾರರ ನ್ನಾಗಿ ಆಲೆಕಟ್ಟೆ ರಸ್ತೆಯ ಎಚ್.ಕೆ. ಗಂಗಾಧರ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.