ನಾಪೆÇೀಕ್ಲು, ಅ. 19: ನಾಪೆÇೀಕ್ಲು ಪಟ್ಟಣದಲ್ಲಿ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಸುಂಟಿಕೊಪ್ಪ : ಇಲ್ಲಿನ 7ನೇ ಮೈಲು, ಗದ್ದೆಹಳ್ಳ ಮತ್ತು ಸುಂಟಿಕೊಪ್ಪ ಪಟ್ಟಣದಲ್ಲಿ ಕೆದಕಲ್À ಭದ್ರಕಾಳಿ ದೇವಸ್ಥಾನ ಮತ್ತು ಯೂತ್ ಫೆಡರೇಷನ್ ಕ್ಲಬ್ ಸಮಿತಿಯ ವತಿಯಿಂದ ಕಾವೇರಿ ಮಾತೆಯ ತೀರ್ಥವನ್ನು ವಿತರಿಸಲಾಯಿತು.

ಪಟ್ಟಣದ ಎಲ್ಲಾ ಬೀದಿಗಳಲ್ಲಿ ವಾಹನದ ಮೂಲಕ ಸಂಚರಿಸಿ ಸಾರ್ವಜನಿಕರಿಗೆ ಕಾವೇರಿ ತೀರ್ಥವನ್ನು ಸಂಘಟಕರು ಹಂಚಿದರು.

ಯೂತ್ ಫೆಡರೇಷನ್ ಕ್ಲಬ್ ಅಧ್ಯಕ್ಷ ಕೆ.ಎಂ.ಸತೀಶ್, ಸದಸ್ಯರಾದ ಪಿ.ಸಿ.ಸುರೇಶ್, ಒ.ಜಿ. ರಾಜನ್, ಶಿವಮಣಿ, ಗಂಗಾಧರ, ಕೌಶಿಕ್, ಮೋಣಪ್ಪ, ವಿವೇಕ್, ಅರವಿಂದ ಇತರರು ಇದ್ದರು.

ಸೋಮವಾರಪೇಟೆ: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಪವಿತ್ರ ಕಾವೇರಿ ತೀರ್ಥವನ್ನು ಸೋಮವಾರಪೇಟೆ ವ್ಯಾಪ್ತಿಯ ಸಾರ್ವಜನಿಕರಿಗೆ ವಿತರಿಸಲಾಯಿತು.

ತಲಕಾವೇರಿಯಿಂದ ತಂದ ಪವಿತ್ರ ತೀರ್ಥವನ್ನು ಇಲ್ಲಿನ ಕಾವೇರಿ ಪ್ರತಿಮೆಯ ಬಳಿ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ವಿತರಿಸಲಾಯಿತು. ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಕಾರ್ಯದರ್ಶಿ ಹೆಚ್.ಒ. ಪ್ರಕಾಶ್, ಪದಾಧಿಕಾರಿಗಳಾದ ರಾಜಪ್ಪ, ರವಿ, ಗಣೇಶ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.