ಮಡಿಕೇರಿ, ಅ. 19: ಕೊಂಡಂಗೇರಿಯಲ್ಲಿರುವ ಕೊಡಗು ಜಿಲ್ಲಾ ಮುಸ್ಲಿಂ ಅನಾಥಾಲಯದ ಆಶ್ರಯದಲ್ಲಿ ಮೂರ್ನಾಡಿನಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಡದ ಉದ್ಘಾಟನೆ ತಾ. 20 ರಂದು (ಇಂದು) ಮಧ್ಯಾಹ್ನ 3.30ಕ್ಕೆ ನಡೆಯಲಿದೆ.

ಅನಾಥಾಲಯದ ಅಧ್ಯಕ್ಷ ಜೆ.ಎ. ಶಾದುಲಿಹಾಜಿ ಅವರ ಅಧ್ಯಕ್ಷತೆಯಲ್ಲಿ ನೂತನ ಕಟ್ಟಡವನ್ನು ವಳಪಟ್ಟಣದ ಸಯ್ಯದ್ ಅಹ್ಮದ್ ಜಲಾಲುದ್ದೀನ್ ತಂಙಳ್ ಉದ್ಘಾಟಿಸಲಿದ್ದು, ಮಡಿಕೇರಿ ಬದ್ರಿಯಾ ಮಸೀದಿಯ ಧರ್ಮಗುರು ಅಬೂಸುಫಿಯಾನ್ ಹೆಚ್.ಐ. ಇಬ್ರಾಹಿಂ ಮದನಿ ಮುಖ್ಯ ಭಾಷಣ ಮಾಡಲಿದ್ದಾರೆ. ಕಟ್ಟಡದ ಗುತ್ತಿಗೆದಾರ ಕೆ.ಎ. ಮಜೀದ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅನಾಥಾಲಯ ಸಂಸ್ಥೆಯ ಪ್ರಾಂಶುಪಾಲ ಕೆ.ಎಸ್. ಶಾದುಲಿ ಫೈಝಿ ತಿಳಿಸಿದ್ದಾರೆ.