ಕರಿಕೆ, ಅ. 20 : ಇಲ್ಲಿನ ತೋಟಂ ಎಂಬಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಕರಿಕೆಯ ತೋಟಂ ಕೊಚ್ಚಿ ಮಹಮದ್ ಎಂಬವರ ತೋಟದ ಮನೆಯಲ್ಲಿ ಏಳು ಅಡಿ ಉದ್ದ ಹಾಗೂ ಇಪ್ಪತ್ತೆಳು ಕೆ.ಜಿ.ತೂಕದ ಹೆಬ್ಬಾವನ್ನು ಕರಿಕೆ ಉಪವಲ ಯಾರಣ್ಯಧಿಕಾರಿ ಪಿ.ಟಿ. ಶಶಿ ಹಾಗೂ ಅರಣ್ಯ ರಕ್ಷಕರಾದ ಅಶೋಕ, ಗಿರೀಶ್ ಸಿಬ್ಬಂದಿಗಳು ಸೆರೆ ಹಿಡಿದು ತಲಕಾವೇರಿ ವನ್ಯಧಾಮಕ್ಕೆ ಬಿಡ ಲಾಯಿತು. ಕಳೆದ ಎರಡು ತಿಂಗಳಲ್ಲಿ ನಾಲ್ಕು ಹೆಬ್ಬಾವು ಸೆರೆಯಾಗಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.