ಮಡಿಕೇರಿ, ಅ. 23: ಕುಲದೇವಿ ಶ್ರೀ ಕಾವೇರಿ ಮಾತೆಗೆ ಮೂಲತಃ ಮಡಿಕೇರಿಯವರಾದ ದುಬೈಯಲ್ಲಿರುವ ಉದ್ಯಮಿ ನಗರದ ಕಾವೇರಿ ಹಾಲ್ ಮಾಲೀಕ ಪೊನ್ನಚೆಟ್ಟೀರ ಅರುಣ್ ಕಾರ್ಯಪ್ಪ ಅವರು ಅಂದಾಜು ರೂ. 3 ಲಕ್ಷ ಮೌಲ್ಯದ ಚಿನ್ನದ ಹಾರವನ್ನು ಅರ್ಪಿಸಿದ್ದಾರೆ. ಹವಳ- ಮುತ್ತು ಜೋಡಿಸಿದ ಮೂರು ಎಳೆಯ ಚಿನ್ನದ ಹಾರವನ್ನು ಅವರು ತೀರ್ಥೋದ್ಭವದ ಸಂದರ್ಭ ಮಾತೆಗೆ ಸಮರ್ಪಿಸಿದರು.