ಮಡಿಕೇರಿ, ಅ.22 : ಚೆರಿಯ ಪರಂಬು ಮತ್ತು ಕಲ್ಲುಮೊಟ್ಟೆ ಗ್ರಾಮವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಚರ್ಚಿಸಲು ಚೆರಿಯಪರಂಬು ಮತ್ತು ಕಲ್ಲುಮೊಟ್ಟೆ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ತಾ.23 ರಂದು (ಇಂದು) ಗ್ರಾಮಸ್ಥರ ಸಭೆಯನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಷೀರ್ ಆಲಿ ತಿಳಿಸಿದ್ದಾರೆ. ಕಲ್ಲುಮೊಟ್ಟೆ ಸಮುದಾಯ ಭವನದಲ್ಲಿ 4ನೇ ಗ್ರಾಮಸ್ಥರ ಸಭೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ನಾಪೋಕ್ಲು ಗ್ರಾ.ಪಂ ಅಧ್ಯಕ್ಷರಾದ ಕೆ.ಎ.ಇಸ್ಮಾಯಿಲ್, ಉಪಾಧ್ಯಕ್ಷರಾದ ಸಾಬ ತಿಮ್ಮಯ್ಯ, ಜಿ.ಪಂ. ಸದಸ್ಯರಾದ ಮುರುಳಿ ಕರುಂಬಯ್ಯ, ತಾ.ಪಂ ಸದಸ್ಯರಾದ ಕೆ.ಎ.ಇಂದಿರಾ, ನಾಪೋಕ್ಲು ಗ್ರಾ.ಪಂ ಸದಸ್ಯರಾದ ಮಹಮ್ಮದ್ ಕುರೈಶಿ, ಕುಶಾಲಪ್ಪ, ಸುಶೀಲಮ್ಮ, ಕಂದಾಯ ಅಧಿಕಾರಿ ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಲಿದ್ದಾರೆ.