ಸಿದ್ದಾಪುರ, ಅ. 24: ಕಾಫಿ ತೋಟದಲ್ಲಿದ್ದ ಎರಡು ತೇಗದ ಮರಗಳನ್ನು ಕಡಿದು ಕಳ್ಳತನ ಮಾಡಿರುವ ಘಟನೆ ಸಮೀಪದ ಬಾಡಗ-ಬಾಣಂಗಾಲ ಗ್ರಾಮದ ಜೇಕಬ್ ಚೆರಿಯನ್ ಎಂಬವರ ಕಾಫಿ ತೋಟದಲ್ಲಿ ನಡೆದಿದೆ.

ಜೇಕಬ್ ಚೆರಿಯನ್ ಅವರ ಕಾಫಿ ತೋಟದಲ್ಲಿ ಬೃಹತ್ ಗಾತ್ರದಲ್ಲಿ ಬೆಳೆದು ನಿಂತಿದ್ದ ತೇಗದ ಮರವನ್ನು ರಾತ್ರಿ ವೇಳೆಯಲ್ಲಿ ಕಳ್ಳರು ಕಡಿದು ಸಾಗಾಟ ಮಾಡಿದ್ದಾರೆ. ಈ ಬಗ್ಗೆ ಜೇಕಬ್ ಚೆರಿಯನ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.