ಕುಶಾಲನಗರ, ಅ. 24: ಕುಶಾಲನಗರ ಕೇಂದ್ರವಾಗಿರಿಸಿ ಕೊಂಡು ಕಾವೇರಿ ತಾಲೂಕು ರಚಿಸಬೇಕು ಎನ್ನುವ ದಶಕಗಳ ಹಿಂದಿನ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಕಾರು ನಿಲ್ದಾಣದ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯುತ್ತಿರುವ ಸರದಿ ಸತ್ಯಾಗ್ರಹ 10 ದಿನಗಳನ್ನು ಪೂರೈಸಿದೆ. ಮಂಗಳವಾರ ಕುಶಾಲ ನಗರದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಧರಣಿ ನಡೆಯಿತು. ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿನ ಶ್ರೀ ಗುಂಡೂರಾವ್ ಸತ್ಯಾಗ್ರಹ ವೇದಿಕೆ ಯಲ್ಲಿ ಧರಣಿ ನಡೆಸಿದ ಕುಶಾಲ ನಗರದ ಕೊಡವ ಸಮಾಜ, ದೇವಾಂಗ ಸಮಾಜ, ಕೇರಳ ಸಮಾಜ, ಮುತ್ತಪ್ಪ ಸೇವಾ ಸಮಿತಿ ಪ್ರಮುಖರು ಧರಣಿ ನಡೆಸಿದರು.

ಈ ಸಂದರ್ಭ ವಿವಿಧ ಸಮಾಜಗಳ ಪ್ರಮುಖರಾದ ಕೆ.ಆರ್. ಶಿವಾನಂದನ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಡಿ.ಆರ್. ಸೋಮಶೇಖರ್, ಡಿ.ಟಿ. ವಿಜಯೇಂದ್ರ, ರಾಜೇಶ್, ತಾಲೂಕು ಹೋರಾಟ ಸಮಿತಿ ಪ್ರಮುಖರಿದ್ದರು.