ಗುಡ್ಡೆಹೊಸೂರು, ಅ. 25: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಇಲ್ಲಿನ ದಾಸವಾಳದ ಕೋಳ್ಳಿರ ಕುಟುಂಬಸ್ಥರ ಮನೆಯ ಮುಂಭಾಗ ಹಾದು ಹೋಗುವ ಸಾರ್ವಜನಿಕ ರಸ್ತೆಗೆ ಕಾಂಕ್ರೀಟ್ ಹಾಕುವದು. ದಾಸವಾಳ ಪೈಸಾರಿ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ, ಅಲ್ಲಿನ ವಿವಾಸಿ ನಾರಾಯಣ ಅವರ ಮನೆಯ ಮುಂಭಾಗ ಸಾರ್ವಜನಿಕ ಚರಂಡಿ ನಿರ್ಮಾಣ, ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೈತೊಳೆಯುವ ತೊಟ್ಟಿ ನಿರ್ಮಾಣಕ್ಕಾಗಿ ತಾಲೂಕು ಪಂಚಾಯಿತಿ ಸದಸ್ಯ ವಿಜು ಚಂಗಪ್ಪ, ಗ್ರಾ.ಪಂ. ಅಧ್ಯಕ್ಷೆ ಜೈನಭಿ ಭೂಮಿಪೂಜೆ ಮಾಡಿದರು.

ಈ ಕಾಮಗಾರಿಯನ್ನು ನಂಜರಾಯಪಟ್ಟಣದ ಗ್ರಾಮ ಪಂಚಾಯಿತಿ ನಿಧಿಯಿಂದ ನಡೆಸಲಾಗುವದೆಂದು ಪಂಚಾಯಿತಿ ಅಧಿಕಾರಿ ಕಲ್ಪ ಈ ಸಂದರ್ಭ ತಿಳಿಸಿದರು. ಈ ಸಂದÀರ್ಭ ಗ್ರಾ.ಪಂ. ಉಪಾಧ್ಯಕ್ಷೆ ಜೆ.ಸಿ. ಕುಮಾರಿ, ಕೋಟುಮಾಡ ನವೀನ್ (ವಿಜು) ಟಿ.ಕೆ. ಸುಮೇಶ್, ತಮ್ಮಯ್ಯ, ಚಂದ್ರವತಿ ಮತ್ತು ಗ್ರಾಮಸ್ಥರು ಹಾಜರಿದ್ದರು. ಅರ್ಚಕÀ ಅಪ್ಪಣ್ಣ ಪೂಜೆ ನೆರವೇರಿಸಿದರು.