ಸೋಮವಾರಪೇಟೆ, ಅ. 25: ಸಮೀಪದ ತಣ್ಣೀರುಹಳ್ಳ ಗ್ರಾಮದ ಗಿಲ್ಲಿ ಬ್ರದರ್ಸ್ ತಂಡದಿಂದ ಅಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ತಂಡದ ಸದಸ್ಯರುಗಳು ಅಂಗನವಾಡಿ ಆವರಣದ ಸುತ್ತಮುತ್ತ ಬೆಳೆಯಲಾಗಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು.

ಇದೇ ಸಂದರ್ಭ ಆವರಣದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ಕಸದ ತೊಟ್ಟಿಯನ್ನು ನಿರ್ಮಿಸಲಾಯಿತು. ತಂಡದ ಅಧ್ಯಕ್ಷ ಗೋವಿಂದರಾಜು, ಖಜಾಂಚಿ ಎಂ.ಟಿ. ರವಿ, ಕಾರ್ಯದರ್ಶಿ ಟಿ.ಎಸ್. ರವಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.