ವೀರಾಜಪೇಟೆ. ಅ: 26: ವೀರಾಜಪೇಟೆ ವಿಭಾಗದ ಮಹಿಳಾ ಕಾಂಗ್ರೆಸ್ ನೂತನವಾಗಿ 18 ವಲಯ ಅಧ್ಯಕ್ಷರುಗಳನ್ನು ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಮುಕ್ಕಾಟಿರ ಕಾವೇರಮ್ಮ ಕರುಂಬಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಮ್ಮ ಅವರು ಆರ್ಜಿ ಗ್ರಾಮದ ಹೆಚ್.ಬಿ. ಪಾರ್ವತಿ, ಹಾಲುಗುಂದದ ರತ್ನಾ ಡೇವಿಡ್, ಚಂಬೆಬೆಳ್ಳೂರು ಎಂ.ಕೆ. ಜಯಂತಿ, ಪಾಲಿಬೆಟ್ಟದ ಜಯಮ್ಮ, ಅಮ್ಮತ್ತಿಯ ಪದ್ಮಿನಿ, ಅಮ್ಮತ್ತಿ ಕಾರ್ಮಾಡು ಗ್ರಾಮದ ಮಾಚಿಮಾಡ ಸರೋಜಿನಿ, ಮಾಲ್ದಾರೆ ಗ್ರಾಮದ ಸಿ.ಎನ್. ಮಾಲತಿ ಕೊಂಡಂಗೇರಿ ಗ್ರಾಮದ ಸಿ.ಎ. ಶಾಫಿಯಾ, ಸಿದ್ದಾಪುರ ಎಸ್.ಕೆ. ಸುಶೀಲಾ, ಚೆನ್ನಯ್ಯನ ಕೋಟೆಯ ಕೆ.ಆರ್, ಕಾವೇರಮ್ಮ, ಕೆದಮುಳ್ಳೂರು ಗ್ರಾಮದ ನಾಯಮಂಡ ತೇಜ, ಕಾಕೋಟುಪರಂಬು ಗ್ರಾಮದ ಪಿ.ಎ. ಹವಮ್ಮ, ಬೇಟೊಳಿ ಗ್ರಾಮದ ಟಿ.ಕೆ. ಶೀಲಾಮಣಿ, ಕಣ್ಣಂಗಾಲ ಗ್ರಾಮದ ತುಳಸಿ, ಬಿಟ್ಟಂಗಾಲ ಗ್ರಾಮದ ಮೇಚಿಯಂಡ ಪ್ರಭಾವತಿ, ಬಿಳುಗುಂದ ಗ್ರಾಮದÀ ರೇವತಿ, ಕದನೂರು ಗ್ರಾಮದ ಅಂಬಿಕಾ ತಿಮ್ಮಯ್ಯ, ಹೊಸೂರು ಗ್ರಾಮದ ಗಾಯತ್ರಿ ಇವರುಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷರುಗಳಾದ ಹೆಚ್.ಪಿ. ವಿಲೀನಾ, ರಾಣಿ ನಾರಾಯಣ್, ಕಾರ್ಯದರ್ಶಿಗಳಾದ ತೋರೆರ ಪೊನ್ನಕ್ಕಿ ಗಣೇಶ್, ಗಾಯತ್ರಿ ನರಸಿಂಹನ್ ಉಪಸ್ಥಿತರಿದ್ದರು.