ಮಡಿಕೇರಿ, ಅ. 26: ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ ಅಭಿಯಾದ ಮೊದಲ ಹಂತದ ಕಾರ್ಯಕ್ರಮ ನಗರದಾದ್ಯಂತ ಯಶಸ್ವಿಯಾಗಿದ್ದು, ಸುಮಾರು 5 ಸಾವಿರ ಮನೆಗಳಿಗೆ ನಾಯಕರು ಹಾಗೂ ಕಾರ್ಯಕರ್ತರು ಭೇಟಿ ನೀಡಿ ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ತಿಳಿಸಿದ್ದಾರೆ.

ನಗರದ ವಿವಿಧೆಡೆ ನಡೆದ ಮನೆ ಮನೆ ಕಡೆಗೆ ಕಾಂಗ್ರೆಸ್ ನಡಿಗೆ ಅಭಿಯಾದ ನೇತೃತ್ವ ವಹಿಸಿದ್ದ ಅವರು ಮುಂದಿನ ಹಂತದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾಂಗ್ರೆಸ್ ಸರಕಾರದ ಸಾಧನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವದೆಂದು ತಿಳಿಸಿದರು.

ಈಗಾಗಲೇ ನಗರದ ಬಡಾವಣೆಗಳಾದ ರಾಜರಾಜೇಶ್ವರಿ ನಗರ, ಆಜಾದ್ ನಗರ, ತ್ಯಾಗರಾಜನಗರ, ಎ.ವಿ ಶಾಲೆ ಬಳಿ, ಮಹದೇವಪೇಟೆ, ಗಣಪತಿ ಬೀದಿ, ರಾಣಿಪೇಟೆ, ಹಿಲ್‍ರಸ್ತೆ, ಮಕಾನ್‍ಗಲ್ಲಿ, ಅಂಬೇಡ್ಕರ್ ಬಡಾವಣೆ, ಮಠದ ರಸ್ತೆ, ಭಗವತಿ ನಗರಗಳಲ್ಲಿ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಎ.ಸಿ. ದೇವಯ್ಯ, ಹೆಚ್.ಎಂ. ನಂದಕುಮಾರ್, ಪ್ರಕಾಶ್ ಆಚಾರ್ಯ, ತಜುಸುಂ, ಉದಯಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ. ವೆಂಕಟೇಶ್, ಉಪಾಧ್ಯಕ್ಷ ಜಫ್ರುಲ್ಲ, ಪ್ರಮುಖರಾದ ಟಿ.ಎಂ. ಅಯ್ಯಪ್ಪ, ಯೂಸೂಫ್, ಮೊಹಮ್ಮದ್, ಸದಾಮುದ್ದಪ್ಪ, ಪುಲಿಯಂಡ ಜಗದೀಶ್, ಶಶಿ, ಕುಸುಮ, ರಾಧಾ, ಹನೀಫ್, ವಿ.ಪಿ. ಪ್ರಭು ರೈ, ಅಂಬೆಕಲ್ ನವೀನ್ ಕುಶಾಲಪ್ಪ, ಜಗದೀಶ್, ಇಸ್ಮಾಯಿಲ್ ಪಾಲ್ಗೊಂಡಿದ್ದರು.