ಸೋಮವಾರಪೇಟೆ, ಅ.27: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ 11ನೇ ವರ್ಷದ ರಾಜ್ಯೋತ್ಸವ ಕಬಡ್ಡಿ ಪಂದ್ಯದಲ್ಲಿ ಗೆಳೆಯರ ಬಳಗದ ತಂಡ ಪ್ರಥಮ ಬಹುಮಾನ ಪಡೆದರೆ, ಕೆಂಚಮ್ಮನ ಬಾಣೆ ತಂಡ ದ್ವಿತೀಯ ಸ್ಥಾನ ಗಳಿಸಿತು.

ಹಗ್ಗ ಜಗ್ಗಾಟದಲ್ಲಿ ಜೇಸಿ ವೇದಿಕೆ ತಂಡ ಪ್ರಥಮ ಬಹುಮಾನ ಗಳಿಸಿತು. ಚಿಂತನ್‍ಗೌಡ ತಂಡ ಎರಡನೇ ಸ್ಥಾನವನ್ನು ಪಡೆಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಐಗೂರಿನ ‘ಸ್ನೇಹಕೂ ಬದ್ಧ, ಸಮರಕೂ ಸಿದ್ಧ’ ತಂಡ ಪ್ರಥಮ ಬಹುಮಾನ ಹಾಗೂ ಪಟ್ಟಣದ ನ್ಯಾಕ್ ಕ್ರಿಕೇಟರ್ಸ್ ತಂಡ ದ್ವಿತೀಯ ಬಹುಮಾನ ಪಡೆಯಿತು.

ಕ್ರೀಡಾಕೂಟದ ಸಂದರ್ಭ ಸಂಘದ ಅಧ್ಯಕ್ಷ ಆರ್. ಮೋಹನ್, ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಶಶಿಧರ್, ಸಂಘದ ಕಾರ್ಯದರ್ಶಿ ಹೆಚ್.ಕೆ. ಗಂಗಾಧರ್, ಖಜಾಂಚಿ ಮಹಮ್ಮದ್ ಶಫಿ, ಸಹಕಾರ್ಯದರ್ಶಿ ಬಿ.ಜಿ. ರವಿ ಮತ್ತಿತರರು ಉಪಸ್ಥಿತರಿದ್ದರು.