ಮಡಿಕೇರಿ, ಅ. 27: ಕುಶಾಲನಗರವನ್ನು ಕಾವೇರಿ ತಾಲೂಕನ್ನಾಗಿ ರಚಿಸ ಬೇಕೆಂದು ಹೋರಾಟ ನಡೆಸುತ್ತಿ ರುವವರು ಚೆಟ್ಟಳ್ಳಿಯನ್ನು ಕಾವೇರಿ ತಾಲೂಕಿಗೆ ಸೇರಿಸಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟಿರುವದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಚೆಟ್ಟಳ್ಳಿ ಜನಪರ ಹೋರಾಟ ಸಮಿತಿಯ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ, ಹೋರಾಟಗಾರರು ಈ ಪ್ರಸ್ತಾಪವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಟ್ಟಳ್ಳಿ ಗ್ರಾಮವನ್ನು ಕಾವೇರಿ ತಾಲೂಕಿಗೆ ಸೇರ್ಪಡೆಗೊಳಿಸಬೇಕೆಂದು ಕಾವೇರಿ ತಾಲೂಕು ಹೋರಾಟ ಸಮಿತಿ ಮಾಡಿರುವ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸುವದಾಗಿ ತಿಳಿಸಿದರು. ಕಳೆÉದ ಹಲವು ವರ್ಷಗಳಿಂದ ಚೆಟ್ಟಳ್ಳಿ ಗ್ರಾಮವನ್ನು ಮಡಿಕೇರಿ ತಾಲೂಕಿಗೆ ಸೇರಿಸಬೇಕೆಂದು ಒತ್ತಾಯಿಸುತ್ತಲೆ ಬರಲಾಗಿದೆ. ಮಡಿಕೇರಿ ತಾಲೂಕು ಅತ್ಯಂತ ಸಣ್ಣ ತಾಲೂಕಾಗಿದ್ದು, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸೇರ್ಪಡೆಯಿಂದ ತಾಲೂಕಿನ ಗಾತ್ರ ಹೆಚ್ಚಾಗಲಿದೆ. ಅಲ್ಲದೆ, ಮಡಿಕೇರಿ ಚೆಟ್ಟಳ್ಳಿಗೆ ಸಮೀಪದಲ್ಲೆ ಇದೆ. ಜಿಲ್ಲಾಡಳಿತದ ಕಚೇರಿಗಳು ಹಾಗೂ ನ್ಯಾಯಾಲಯ ಜಿಲ್ಲಾ ಕೇಂದ್ರ್ರ ಸ್ಥಾನದಲ್ಲೆ ಇರುವದರಿಂದ ಚೆಟ್ಟಳ್ಳಿಯನ್ನು ಮಡಿಕೆÉೀರಿ ತಾಲೂಕಿಗೆ ಸೇರ್ಪಡೆಗೊಳಿಸುವದು ಸೂಕ್ತವೆಂದು ಮಣಿ ಉತ್ತಪ್ಪ ಅಭಿಪ್ರಾಯಪಟ್ಟರು.

ಚೆಟ್ಟಳ್ಳಿ ಗ್ರಾಮಸ್ಥರೊಂದಿಗೆ ಚರ್ಚಿಸದೆ ಕಾವೇರಿ ತಾಲೂಕಿಗೆ ಚೆಟ್ಟಳ್ಳಿಯನ್ನು ಸೇರ್ಪಡೆಗೊಳಿಸುವ ಕುರಿತು ಬೇಡಿಕೆ ಮುಂದಿಟ್ಟಿರುವದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕುಶಾಲನಗರ ತಾಲೂಕು ಕೇಂದ್ರವಾದರೆ, ಮೂರು ಬಸ್‍ಗಳನ್ನು ಚೆಟ್ಟಳ್ಳಿ ಗ್ರಾಮಸ್ಥರು ಬದಲಾಯಿಸಿ ಕುಶಾಲನಗರಕ್ಕೆ ತೆÀರಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದು ಹಿರಿಯ ನಾಗರಿಕರಿಗೆ ತ್ರಾಸದಾಯಕ ಪ್ರಯಾಣವಾಗಲಿದ್ದು, ಚೆಟ್ಟಳ್ಳಿಯನ್ನು ಕಾವೇರಿ ತಾಲೂಕಿಗೆ ಸೇರಿಸಿದ್ದೇ ಆದಲ್ಲಿ ಹಿರಿಯ ನಾಗರಿಕರ ಮೂಲಕವೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಲಾಗುವದು ಅಲ್ಲದೆ, ನ್ಯಾಯಾಲಯದ ಮೊರೆ ಹೋಗಲಾಗುವದೆಂದು ಮಣಿ ಉತ್ತಪ್ಪ ಎಚ್ಚರಿಕೆ ನೀಡಿದರು.

ಈ ಬಗ್ಗೆ ಈಗಾಗಲೇ ಜಿಲ್ಲೆಯ ಶಾಸಕರುಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಈ ಹಿಂದೆ ಗ್ರಾಮ ಪಂಚಾಯಿತಿಗಳ ಪುನರ್ ರಚನೆಯ ಸಮಿತಿ ಚೆಟ್ಟಳ್ಳಿಯನ್ನು ಮಡಿಕೇರಿ ತಾಲೂಕಿಗೆ ಸೇರಿಸುವ ಕುರಿತು ಕ್ರಮ ಕೈಗೊಂಡು ನಕ್ಷೆಯನ್ನು ಕೂಡ ತಯಾರಿಸಲಾಗಿತ್ತು. ಆದರೆ, ಈ ಪ್ರಸ್ತಾಪವನ್ನು ಕೊನೆಯ ಗಳಿಗೆಯಲ್ಲಿ ಕೈಬಿಡಲಾಯಿತೆಂದು ಮಣಿ ಉತ್ತಪ್ಪ ಬೇಸರ ವ್ಯಕ್ತಪಡಿಸಿದರು.

ಈರೆಳವಳಮುಡಿ, ಚೇರಳ ಶ್ರೀಮಂಗಲ, ಕೂಡ್ಲೂರು ಚೆಟ್ಟಳ್ಳಿ ಗ್ರಾಮಗಳನ್ನು ಮಡಿಕೆÉೀರಿ ತಾಲೂಕಿಗೆ ಸೇರಿಸುವ ಕುರಿತು ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಾವೇರಿ ತಾಲೂಕು ಹೋರಾಟ ಸಮಿತಿಯ ನೇತೃತ್ವ ವಹಿಸಿರುವವರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು, ಆ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಹೀಗಿರುವಾಗ ಹೋರಾಟದ ಅಗತ್ಯವೇನಿದೆಯೆಂದು ಮಣಿ ಉತ್ತಪ್ಪ ಪ್ರಶ್ನಿಸಿದರು.

ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ಅವರು, ಅಲ್ಪ ಸಂಖ್ಯಾತರು ಹಾಗೂ ಹಿಂದೂಗಳು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿರುವಾಗ ಸಮಾಜವನ್ನು ಒಡೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಪಿ ಸಿದರು. ಟಿಪ್ಪು ಜಯಂತಿಯ ದಿನ ಚೆಟ್ಟಳ್ಳಿಯಲ್ಲಿ ಜನಪರ ಹೋರಾಟ ಸಮಿತಿಯಿಂದ ಕಪÀÅ್ಪಪಟ್ಟಿ ಧರಿಸಿ ಕರಾಳ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಧನಂಜಯ್ ಹಾಗೂ ಚೆÀಟ್ಟಳ್ಳಿ ಬಿಜೆಪಿ ಪ್ರಮುಖರಾದ ಬೊಳ್ಳಂಡ ಕಾಶಿ ದೇವಯ್ಯ ಉಪಸ್ಥಿತರಿದ್ದರು.