ಶ್ರೀಮಂಗಲ, ಅ. 29: ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಕಸವಿಲೇವಾರಿಗೆ ಪಂಚಾಯಿತಿ ಕಚೇರಿ ಸಮೀಪ ಸ್ವಚ್ಛ ಭಾರತ ಅಭಿಯಾನದ ರೂ. 4.99 ಲಕ್ಷ ವೆಚ್ಚದಲ್ಲಿ ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಕಸವಿಲೇವಾರಿಗೆ ವಾಹನ ಖರೀದಿಗೆ ರೂ. 6.50 ಲಕ್ಷ ಅನುದಾನವನ್ನು ಕಾಯ್ದಿರಿಸಲಾಗಿದೆ. ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಅದರಲ್ಲೂ ಕುಟ್ಟ ಪಟ್ಟಣದ ಕಸವಿಲೇವಾರಿಗೆ ಈ ಘಟಕ ಸ್ಥಾಪನೆಯಿಂದ ಸಮಸ್ಯೆ ಬಗೆಹರಿಯಲಿದೆ ಎಂದು ಜಿ.ಪಂ ಸದಸ್ಯ ಶಿವು ಮಾದಪ್ಪ ಹೇಳಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಶಿವು ಮಾದಪ್ಪ, ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ, ಗ್ರಾ.ಪಂ. ಉಪಾಧ್ಯಕ್ಷ ಹೊಟ್ಟೇಂಗಡ ಉತ್ತಪ್ಪ, ಜಿ.ಪಂ. ನೋಡಲ್ ಅಧಿಕಾರಿ ಅಜ್ಜೀಕುಟ್ಟಿರ ಸೂರಜ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೆಕರ್, ಪಿಡಿಓ ಬಲರಾಮ್, ತಾಲೂಕು ಅಕ್ರಮ-ಸಕ್ರಮ ಸದಸ್ಯ ರಾಮಕೃಷ್ಣ ಮತ್ತು ಗ್ರಾ.ಪಂ. ಸದಸ್ಯರು ಭಾಗವಹಿಸಿದ್ದರು.