ಸಿದ್ದಾಪುರ, ಅ. 29 : ಕುಶಾಲನಗರವನ್ನು ಕೇಂದ್ರವನ್ನಾಗಿಟ್ಟು ಕೊಂಡು ನೂತನ ತಾಲೂಕನ್ನಾಗಿ ಮಾಡಬೇಕೆಂದು ಒತ್ತಾಯಿಸಿ ವಾಲ್ನೂರು ತ್ಯಾಗತ್ತೂರು ಗ್ರಾಮಸ್ತರು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ತಾಲೂಕಿಗೆ ಒತ್ತಾಯಿಸಿ ಘೋಷಣೆ ಹಾಕಿದರು. ನಂತರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿದರು.

ತಾ. 30ರಂದು (ಇಂದು) ಕುಶಾಲನಗರದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಹೋರಾಟಕ್ಕೆ ಗ್ರಾಮಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು. ಜಿ.ಪಂ. ಮಾಜಿ ಸದಸ್ಯ ಎ.ವಿ. ಶಾಂತಕುಮಾರ್ ಮಾತನಾಡಿ ನೂತನ ತಾಲೂಕಿಗಾಗಿ ಒತ್ತಾಯಿಸಿ ರಾಜಕೀಯ ರಹಿತವಾಗಿ ಹೋರಾಟ ಗಳು ನಡೆಸುತ್ತಿದ್ದು ಗ್ರಾಮಸ್ತರು ಸಹಕಾರ ನೀಡಬೇಕೆಂದÀರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ಗ್ರಾ.ಪಂ. ಅಧ್ಯಕ್ಷೆ ನಾಗರತ್ನ, ತಾ.ಪಂ ಸದಸ್ಯೆ ಸುಹದಾ, ನೆಲ್ಯಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಹೋರಾಟ ಸಮಿತಿಯ ಪ್ರಮುಖರಾದ ಎಂ.ಎಂ. ಬಿದ್ದಪ್ಪ, ಪಿ.ಆರ್. ಭರತ್, ಮಹೇಶ್, ಮುಂಡ್ರುಮನೆ ಸುದೀಶ್, ಖಾದರ್ ಇನ್ನಿತರರು ಹಾಜರಿದ್ದರು.