ಸುಂಟಿಕೊಪ್ಪ, ಅ. 29: ತೀರಾ ಹದಗೆಟ್ಟು ಹೋಗಿದ್ದ ಕಾಜೂರು- ಯಡವಾರೆ ರಸ್ತೆಗೆ ಕಾಯಕಲ್ಪ ಯಾವಾಗ ಎಂದು ಸಾರ್ವಜನಿಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಐಗೂರು ಜಂಕ್ಷನ್‍ನಿಂದ ಪಾಷಾಣ ಮೂರ್ತಿ ದೇವಾಲಯಕ್ಕೆ ತೆರಳಿ ಕಾಜೂರು ಯಡವಾರೆಗೆ ತೆರಳುವ ಪ್ರಮುಖ ರಸ್ತೆ ತೀರಾ ಹಾಳಾಗಿದ್ದು ಶಾಲಾ ಮಕ್ಕಳು ಸಾರ್ವಜನಿಕರು ನಡೆದಾಡಲು ಪ್ರಯಾಸ ಪಡುವಂತಾಗಿದೆ. ಆಟೋ ರಿಕ್ಷಾ ಕಾರು ದ್ವಿಚಕ್ರ ವಾಹನ, ವ್ಯಾನ್, ಜೀಪು, ಲಾರಿಗಳನ್ನು ಈ ರಸ್ತೆಗಾಗಿ ಚಾಲಿಸಲು ಚಾಲಕರುಗಳು ಹರ ಸಾಹಸ ಪಡುವಂತಾಗಿದೆ.

ಗ್ರಾ.ಪಂ. ಚಾಲಕರು ಪಂಚಾಯಿತಿ, ಜಿ.ಪಂ. ಸದಸ್ಯರುಗಳಿಗೆ ಮನವಿ ಸಲ್ಲಿಸಿದ್ದರೂ ಈ ರಸ್ತೆ ಕಾಮಗಾರಿಗೆ ಮುಕ್ತಿ ದೊರಕಿಲ್ಲ ಜಿ.ಪಂ. ಸದಸ್ಯರು ಐಗೂರು ಗ್ರಾಮವನ್ನು ಮರತೇ ಹೋಗಿದ್ದಾರೆ. ಶಾಸಕರು ಜಿ.ಪಂ., ತಾ.ಪಂ. ಗ್ರಾ.ಪಂ. ಸದಸ್ಯರುಗಳು ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.