ಮಡಿಕೇರಿ, ಅ. 29: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು, ಆಯಾ ಜನಾಂಗದ ಗುತ್ತಿಗೆದಾರರಿಗೆ ಸರಕಾರ ಕಾಮಗಾರಿ ನೀಡುವದರೊಂದಿಗೆ ಶೇ. 24.1ರಷ್ಟು ಮೊತ್ತವನ್ನು ಒದಗಿಸಲಿದ್ದು, ಈ ದಿಸೆಯಲ್ಲಿ ನೂತನ ಗುತ್ತಿಗೆದಾರರ ಸಂಘ ರಚಿಸಲಾಗಿದೆ ಎಂದು ಅಧ್ಯಕ್ಷ ಆರ್.ಸಿ. ವಿಜಯ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಇಂದು ನಗರದ ಹೊಟೇಲ್ ಕ್ರಿಸ್ಟಲ್ ಕೋರ್ಟ್‍ನಲ್ಲಿ ಸಭೆ ನಡೆಸಿ, 25ಕ್ಕೂ ಅಧಿಕ ಪರಿಶಿಷ್ಟ ಜಾತಿ - ವರ್ಗದ ಸದಸ್ಯರು ಪಾಲ್ಗೊಂಡು ನೂತನ ಸಂಘ ರಚಿಸಿಕೊಂಡಿರುವ ದಾಗಿ ಅವರು ವಿವರಿಸಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ಪೊನ್ನಂಪೇಟೆಯ ಬಾಬು, ಕಾರ್ಯದರ್ಶಿಯಾಗಿ ವಿಜಯಕುಮಾರ್, ಸಹ ಕಾರ್ಯದರ್ಶಿಯಾಗಿ ಎನ್.ಪಿ. ಗೋವಿಂದ, ಖಜಾಂಚಿಯಾಗಿ ವೈ.ಟಿ. ಪರಮೇಶ್ ಹಾಗೂ ಸಲಹೆಗಾರರಾಗಿ ಆರ್.ಸಿ. ಗಣೇಶ್ ಸೇರಿದಂತೆ ನಿರ್ದೇಶಕರುಗಳಾಗಿ ದೊರೆಸ್ವಾಮಿ, ಎನ್.ಪಿ. ಭೀಮಯ್ಯ, ರಾಜಪ್ಪ, ವಿಜಯಕುಮಾರ್ ಹಾಗೂ ಬಸವರಾಜ್ ಮತ್ತು ರಮೇಶ್ ಆಯ್ಕೆಗೊಂಡಿರುವದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.