ಸೋಮವಾರಪೇಟೆ, ಅ. 29: ಐತಿಹಾಸಿದ ಹಿನ್ನೆಲೆಯುಳ್ಳ ದೊಡ್ಡಮಳ್ತೆ ಹೊನ್ನಮ್ಮನ ಕೆರೆ ದಡದಲ್ಲಿರುವ ದೇವಾಲಯದ ಬೀಗ ಒಡೆದಿರುವ ಕಳ್ಳರು ಹೊನ್ನಮ್ಮ ದೇವಿಯ ವಿಗ್ರಹಕ್ಕೆ ಹಾಕಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ.ಶನಿವಾರ ರಾತ್ರಿ 11ಗಂಟೆಗೆ ಮೂವರು ವ್ಯಕ್ತಿಗಳು ಬೀಗ ಒಡೆಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ. ಸೋಮವಾರಪೇಟೆ ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿಗಳು ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.