ನಾಪೋಕ್ಲು, ಅ. 29: ಮಾಜಿ ಸೈನಿಕರ ಕುಟುಂಬಕ್ಕೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮೀಸಲಾತಿ ಹೆಚ್ಚಿಸಲು ಹಾಗೂ ಸಂಘದ ನಿವೇಶನಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ಅನುಷ್ಠಾನಕ್ಕೆ ಸಂಘ ಶ್ರಮಿಸುತ್ತಿದೆ ಎಂದು ಸ್ಥಳೀಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಡೆಯಂಡ ಶಂಭು ತಿಳಿಸಿದ್ದಾರೆ.

ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಮಾಜಿ ಸೈನಿಕರ ಸಂಘದ 2016-17 ರ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ಯನ್ನು ವಹಿಸಿ ಅವರು ಮಾತನಾಡಿ ದರು. ಸಂಘದ ಉಪಾಧ್ಯಕ್ಷ ಕೊಂಡೀರ ಗಣೇಶ್‍ನಾಣಯ್ಯ ಮಾತನಾಡಿ ಸಂಘದ ಸದಸ್ಯರ ವಿಧವಾ ವೇತನ ಸೇರಿದಂತೆ ಅವರ ಅಹವಾಲುಗಳನ್ನು ಸಲ್ಲಿಸಿದ್ದು ಸೂಕ್ತ ಮಾರ್ಗದರ್ಶನ ಹಾಗೂ ವ್ಯವಸ್ಥೆ ಕಲ್ಪಿಸಲಾಗಿದ್ದು ಸಮಸ್ಯೆ ಪರಿಹರಿಸಲಾಗಿದೆ ಎಂದರು.

ವೇದಿಕೆಯಲ್ಲಿ ಖಜಾಂಚಿ ಅಬ್ದುಲ್‍ಕರೀಂ ಹಾಗೂ ಸಂಘದ ನಿರ್ದೇಶಕರು ಹಾಜರಿದ್ದು, ಕಾರ್ಯದರ್ಶಿ ಕೇಟೋಳಿರ ಡಾಲಿ ಅಚ್ಚಪ್ಪ ವರದಿ ವಾಚಿಸಿ ನಾಣಯ್ಯ ಸ್ವಾಗತಿಸಿ ವಂದಿಸಿದರು.