ಮಡಿಕೇರಿ, ಅ. 30: ತುಲಾ ಸಂಕ್ರಮಣ ಜಾತ್ರೆ ಸಂದರ್ಭ ಜಿಲ್ಲಾಡಳಿತದಿಂದ ತರಾತುರಿಯಲ್ಲಿ ಅಲ್ಲಿನ ಭಗಂಡೇಶ್ವರ ದೇಗುಲ ಮುಂಭಾಗ ‘ಇಂಟರ್‍ಲಾಕ್’ ಅಳವಡಿಕೆಗೆ ಮುಂದಾಗಿದ್ದು, ಇನ್ನೂ ಕೆಲಸ ಪೂರೈಸದಿರುವ ಬಗ್ಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಿತ್ಯ ದೇವಾಲಯಕ್ಕೆ ಬರುವ ಹಿರಿಯರ ಸಹಿತ ಭಕ್ತರು ಓಡಾಡಲು ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿರುವ ಅವರು, ತುಲಾ ಸಂಕ್ರಮಣದೊಳಗೆ ಕೆಲಸ ಪೂರೈಸುವದಾಗಿ ನಿರ್ಮಿತಿ ಕೇಂದ್ರ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಅಂದು ತಿಳಿಸಿದ್ದು, ಇಂದಿಗೂ ಕೆಲಸ ಮುಗಿಸದ ಬಗ್ಗೆ ಟೀಕಿಸಿದ್ದಾರೆ.

ದೇವಾಲಯ ವ್ಯವಸ್ಥಾಪನಾ ಸಮಿತಿಯನ್ನು ರಚಿಸದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಧಾರ್ಮಿಕ ಇಲಾಖೆ ದೇಗುಲಗಳಲ್ಲಿನ ಹುಂಡಿ ಹಣ ಸಹಿತ ಸರಕಾರದ ಅನುದಾನ ಸಮರ್ಪಕ ನಿರ್ವಹಣೆಗೊಳ್ಳದೆ ದುರುಪಯೋಗವಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಅವರು, ತುಲಾ ಸಂಕ್ರಮಣ ಸಂದರ್ಭ ಇಲಾಖೆಯಿಂದ ಮಾಡಲಾದ ಖರ್ಚು ವೆಚ್ಚ ಬಿಡುಗಡೆಗೊಳಿಸಲು ಒತ್ತಾಯಿಸಿದ್ದಾರೆ.