ಚೆಟ್ಟಳ್ಳಿ, ಅ. 31: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಉಚಿತ ಗ್ಯಾಸ್ ವಿತರಣಾ ಯೋಜನೆ ಪೂರ್ಣ ಫಲಕಾರಿಯಾಗುತ್ತಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಚೆಟ್ಟಳ್ಳಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ ಮಾಡಿ ಅವರು ಮಾತನಾಡಿದರು. ಚೆಟ್ಟಳ್ಳಿ ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ, ದಂಬೆಕೊಡಿ ಹರೀಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಶ್ರೀಮಂಗಲ ಇಂಡೇನ್ ಗ್ಯಾಸ್ ಮಾಲೀಕರು ಹಾಗೂ ವಿತರಕರಾದ ಮುಳ್ಳಂಡ ಸನ್ನಿ ಅಯ್ಯಪ್ಪ, ಪೇರಿಯನ ಜಯಾನಂದ, ದಂಬೆಕೋಡಿ ಹರೀಶ್, ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಚೇತನ್, ಮುಳ್ಳಂಡ ಪುಷ್ಯ ರಂಜನ್, ಮುಳ್ಳಂಡ ಅಂಜನ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮದುಸೂಧನ್, ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಮುಳ್ಳಂಡ ಕಾಶಿ ದೇವಯ್ಯ ಪುತ್ತರೀರ ಕರುಣ್ ಕಾಳಯ್ಯ ಹಾಜರಿದ್ದರು.